Select Your Language

Notifications

webdunia
webdunia
webdunia
webdunia

ಗಾಂಧಿ ಪ್ರತಿಮೆ ನೋಡಿಯಾದ್ರೂ ಸರ್ಕಾರ ನಿದ್ರೆಯಿಂದ ಏಳಲಿ: ಕಾಗೋಡು

ಗಾಂಧಿ ಪ್ರತಿಮೆ ನೋಡಿಯಾದ್ರೂ ಸರ್ಕಾರ ನಿದ್ರೆಯಿಂದ ಏಳಲಿ: ಕಾಗೋಡು
ಬೆಂಗಳೂರು , ಗುರುವಾರ, 2 ಅಕ್ಟೋಬರ್ 2014 (11:47 IST)
ಗಾಂಧಿ ಪ್ರತಿಮೆ ನೋಡಿಯಾದ್ರೂ ಸರ್ಕಾರ ನಿದ್ರೆಯಿಂದ ಏಳಲಿ ಎಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪ ಹೇಳಿದರು. ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮೇಲಿನ ಮಾತನ್ನು ಉಚ್ಚರಿಸಿದರು. ಸರ್ಕಾರ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಮತ್ತು ಅದರ ಕಾರ್ಯವೈಖರಿ ಬಗ್ಗೆ ಕಾಗೋಡು ಛಾಟಿ ಬೀಸಿದರು. ರಾಜ್ಯಸರ್ಕಾರ ಗಾಢ ನಿದ್ರೆಯಲ್ಲಿದೆ. ಈ ಗಾಂಧಿ ಪ್ರತಿಮೆಯನ್ನು ನೋಡಿಯಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಲಿ ಎಂದು ಚುಚ್ಚಿದರು. 

ವಿಧಾನಸಭೆಯಲ್ಲಿ ಹಲವು ಬಾರಿ ಸರ್ಕಾರದ ಲೋಪದೋಷಗಳ ಬಗ್ಗೆ ಗಮನಸೆಳೆದಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ಕಾರ್ಯವೈಖರಿ ಬಗ್ಗೆ ಇದಕ್ಕೆ ಮುಂಚೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. "ಜನರ ಸಮಸ್ಯೆಗಳಿಗೆ ಆಡಳಿತ ಯಂತ್ರ ಸ್ಪಂದಿಸುತ್ತಿಲ್ಲ. ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸವಿಲ್ಲ. ರಾಜ್ಯ ಸರ್ಕಾರ ನಿಧಾನಗತಿಯಲ್ಲಿ ಸಾಗಿದೆ.
 
ರಾಜ್ಯಸರ್ಕಾರದಲ್ಲಿ ಸರಿಯಾಗಿ ಪಾರದರ್ಶಕತೆ ಕಂಡುಬರುತ್ತಿಲ್ಲ" ಎಂದು ಸ್ಪೀಕರ್ ಕಾಗೋಡು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದರು. ಈಗ ಸರ್ಕಾರ ನಿದ್ದೆಯಿಂದ ಏಳಲಿ ಎಂದು ಹೇಳುವ ಮೂಲಕ ಮತ್ತೊಮ್ಮೆ ಛಾಟಿ ಬೀಸಿದ್ದಾರೆ.   

Share this Story:

Follow Webdunia kannada