Webdunia - Bharat's app for daily news and videos

Install App

ಸರಕಾರಿ ದಸರಾಗೂ ಹಾಗೂ ಅರಮನೆಯ ದಸರಾಗೂ ಸಂಬಂಧವಿಲ್ಲ: ಯದುವೀರ್ ಒಡೆಯರ್

Webdunia
ಬುಧವಾರ, 10 ಆಗಸ್ಟ್ 2016 (15:18 IST)
ರಾಜ್ಯ ಸರಕಾರದ ದಸರಾಗೂ ಹಾಗೂ ಅರಮನೆಯ ದಸರಾಗೂ ಸಂಬಂಧವಿಲ್ಲ. ಅರಮನೆ ಪಂಚಾಂಗದ ಪ್ರಕಾರ ನವರಾತ್ರಿ 10 ದಿನಗಳ ಕಾಲ ಮಾತ್ರ ನಡೆಯುತ್ತದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿಳಿಸಿದ್ದಾರೆ.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಈ ವರ್ಷ ನವರಾತ್ರಿಯನ್ನು 11 ದಿನ ನಡೆಸಲು ನಿರ್ಧರಿಸಿದೆ. ಆದರೆ, ಶಾಸ್ತ್ರದ ಪ್ರಕಾರ ಅರಮನೆಯಲ್ಲಿ 10 ದಿನ ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದರು. 
 
ಈ ಕುರಿತು ಅರಮನೆಯ ಪುರೋಹಿತರು ಪಂಚಾಂಗವನ್ನು ನೋಡಿ ಖಾಸಗಿ ದರ್ಬಾರ್, ನವರಾತ್ರಿ ಪೂಜೆಗಳು ಅಲ್ಲದೆ ಆಯುಧ ಪೂಜೆ ಬಗ್ಗೆ ಸಮಯ ನಿಗದಿ ಮಾಡಲಿದ್ದು, ಈ ಎಲ್ಲ ಜವಾಬ್ದಾರಿಗಳನ್ನು ಪ್ರಮೋದಾದೇವಿ ಅವರು ನೋಡಿಕೊಳ್ಳುತ್ತಾರೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments