ರಾಜ್ಯ ಸರಕಾರದ ದಸರಾಗೂ ಹಾಗೂ ಅರಮನೆಯ ದಸರಾಗೂ ಸಂಬಂಧವಿಲ್ಲ. ಅರಮನೆ ಪಂಚಾಂಗದ ಪ್ರಕಾರ ನವರಾತ್ರಿ 10 ದಿನಗಳ ಕಾಲ ಮಾತ್ರ ನಡೆಯುತ್ತದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಈ ವರ್ಷ ನವರಾತ್ರಿಯನ್ನು 11 ದಿನ ನಡೆಸಲು ನಿರ್ಧರಿಸಿದೆ. ಆದರೆ, ಶಾಸ್ತ್ರದ ಪ್ರಕಾರ ಅರಮನೆಯಲ್ಲಿ 10 ದಿನ ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಕುರಿತು ಅರಮನೆಯ ಪುರೋಹಿತರು ಪಂಚಾಂಗವನ್ನು ನೋಡಿ ಖಾಸಗಿ ದರ್ಬಾರ್, ನವರಾತ್ರಿ ಪೂಜೆಗಳು ಅಲ್ಲದೆ ಆಯುಧ ಪೂಜೆ ಬಗ್ಗೆ ಸಮಯ ನಿಗದಿ ಮಾಡಲಿದ್ದು, ಈ ಎಲ್ಲ ಜವಾಬ್ದಾರಿಗಳನ್ನು ಪ್ರಮೋದಾದೇವಿ ಅವರು ನೋಡಿಕೊಳ್ಳುತ್ತಾರೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ