Select Your Language

Notifications

webdunia
webdunia
webdunia
webdunia

ರಾಜ್ಯಪಾಲರು ಪ್ರವಾಸದಿಂದ ಮರಳದಿದ್ದಲ್ಲಿ ಅವರಿದ್ದಲ್ಲಿಗೆ ವಿಧೇಯಕ ರವಾನೆ : ಸಿದ್ದು

ರಾಜ್ಯಪಾಲರು ಪ್ರವಾಸದಿಂದ ಮರಳದಿದ್ದಲ್ಲಿ ಅವರಿದ್ದಲ್ಲಿಗೆ ವಿಧೇಯಕ ರವಾನೆ : ಸಿದ್ದು
ಬೆಂಗಳೂರು , ಮಂಗಳವಾರ, 21 ಏಪ್ರಿಲ್ 2015 (18:32 IST)
ರಾಜ್ಯಪಾಲ ವಜುಭಾಯಿ ವಾಲಾ ಗುಜರಾತ್ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಿದ್ದು, ಅವರು ಬಂದ ನಂತರ ವಿಧೇಯಕಕ್ಕೆ ಅಂಕಿತ ಹಾಕಲಿದ್ದಾರೆ. ಪ್ರವಾಸದಿಂದ ಮರಳದಿದ್ದಲ್ಲಿ ಅವರಿದ್ದಲ್ಲಿಗೆ ವಿಧೇಯಕ ಅಂಕಿತಕ್ಕಾಗಿ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿ ವಿಭಜನೆ ಅನಿವಾರ್ಯವಾಗಿದೆ. ಆದ್ದರಿಂದ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಇದರಲ್ಲಿ ಬೇರೆ ಉದ್ದೇಶವಿಲ್ಲ. ಬಿಬಿಎಂಪಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಧಾಸಭೆಯಲ್ಲಿ ಬಿಬಿಎಂಪಿ ವಿಭಜನೆಗಾಗಿ ವಿಶೇಷ ಅಧಿವೇಶನ ಕರೆಯುತ್ತಿದ್ದಂತೆ ಅಂದೇ ಮಧ್ಯಾಹ್ನ ರಾಜ್ಯಪಾಲ ವಜುಭಾಯಿ ವಾಲಾ ಗುಜರಾತ್ ರಾಜ್ಯಕ್ಕೆ ಪ್ರ.ಯಾಣ ಬೆಳೆಸಿದ್ದರು.

ರಾಜ್ಯಪಾಲ ವಜುಭಾಯಿ ರಾಜ್ಯಕ್ಕೆ ಮರಳಿದ ನಂತರ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Share this Story:

Follow Webdunia kannada