Select Your Language

Notifications

webdunia
webdunia
webdunia
webdunia

ಸರ್ಕಾರದಲ್ಲಿ ಭಟ್ಟಂಗಿಗಳಿಗೆ ಅವಕಾಶ: ರಮೇಶ್ ಕುಮಾರ್ ಅಸಮಧಾನ

ಸರ್ಕಾರದಲ್ಲಿ ಭಟ್ಟಂಗಿಗಳಿಗೆ ಅವಕಾಶ: ರಮೇಶ್ ಕುಮಾರ್ ಅಸಮಧಾನ
ಬೆಂಗಳೂರು , ಶನಿವಾರ, 31 ಜನವರಿ 2015 (14:11 IST)
ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಮನ್ವಯ ಸಭೆ ನಡೆಯುತ್ತಿದ್ದು, ಇಲ್ಲಿ ಮಾತನಾಡಿದ ಶಾಸಕ ರಮೇಶ್ ಕುಮಾರ್, ಸರ್ಕಾರದಲ್ಲಿ ಭಟ್ಟಂಗಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹಾಗಾಗಿ ಸರ್ಕಾರ ಎತ್ತ ಸಾಗುತ್ತಿದೆಯೋ ಎಂದು ಗೊತ್ತಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಇಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಕೇವಲ ಭಟ್ಟಂಗಿಗಳಿಗೆ ಮಾತ್ರ ಸಚಿವ ಸ್ಥಾನಗಳಿಗೆ ಅವಕಾಶ ನೀಡಲಾಗುತ್ತಿದೆ. ಸರ್ಕಾರದ ಸುತ್ತ ಸುತ್ತವವರಿಗೆ ಮಾತ್ರ ಬೆಲೆ ಸಿಗುತ್ತಿದೆ. ಹಾಗಾಗಿ ಸರ್ಕಾರ ಎತ್ತ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಶಾಸಕ ರಮೇಶ್ ಕುಮಾರ್ ಸರ್ಕಾರಕ್ಕೆ ಮಾತಿ ಚಾಟಿ ಬೀಸಿದರು. 
 
ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮೂರು ದಿನಗಳ ಕಾಲ ಪಕ್ಷದ ಸಮನ್ವಯ ಸಭೆಯನ್ನು ನಡೆಸಲು ಮುಂದಾಗಿದ್ದು, ಇಂದು ಎರಡನೇ ದಿನವಾಗಿದೆ. ಸರ್ಕಾರದ ಬಗ್ಗೆ ಪಕ್ಷದ ಶಾಸಕರಿಂದಲೇ ಅಭಿಪ್ರಾಯ ಪಡೆಯಲು ಸಿಂಗ್ ಮುಂದಾಗಿದ್ದು, ಇಲ್ಲಿ ರಮೇಶ್ ಕುಮಾರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada