Webdunia - Bharat's app for daily news and videos

Install App

ಸರ್ಕಾರ ಪರಿಹಾರವಾಗಿ ನೀಡಿ ಅಪಮಾನ ಮಾಡಿದೆ, ಚೆಕ್ ಬೇಡ: ಶೋಭಾ

Webdunia
ಮಂಗಳವಾರ, 13 ಅಕ್ಟೋಬರ್ 2015 (15:28 IST)
ಜಿಲ್ಲೆಯ ಪಾಂಡವಪುರ ತಾಲೂಕಿನ ಸಣಬದಕೊಪ್ಪಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಲೋಕೇಶ್ ಕುಟುಂಬಕ್ಕೆ ಸರ್ಕಾರ ಚೆಕ್‌ನ್ನು ನೀಡಿ ಮತ್ತೆ ಹಿಂಪಡೆದಿದ್ದ ಹಿನ್ನೆಲೆಯಲ್ಲಿ ಮೃತ ರೈತನ ಪತ್ನಿ ಶೋಭಾ ಪ್ರತಿಕ್ರಿಯಿಸಿದ್ದು, ಸರ್ಕಾರ ಮತ್ತೆ ಚೆಕ್ ನೀಡುಲು ಮುಂದಾಗಿದ್ದು ಸ್ವೀಕರಿಸುವುದಿಲ್ಲ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ರೈತ ಮತಪಟ್ಟಿದ್ದಾನೆ ಎಂಬ ಕನಿಕರದಿಂದ ರಾಹುಲ್ ಗಾಂಧಿ ಅವರು ಚೆಕ್ ವಿತರಿಸಿದ್ದರು. ಆದರೆ ಆ ಚೆಕ್‌ನ್ನು ಐದು ನಿಮಿಷವೂ ನನ್ನ ಕೈಯಲ್ಲಿರಲು ಬಿಡದೆ ಸಚಿವ ಅಂಬರೀಶ್ ಅವರು ಹಿಂಪಡೆದಿದ್ದರು. ಅಲ್ಲದೆ ಹಿಂಪಡೆದು ಈಗಾಗಲೇ ಮೂರು ದಿನಗಳಾಗಿವೆ. ಈ ನಡುವೆ ಮತ್ತೆ ಚೆಕ್ ನೀಡಲು ಸರ್ಕಾರದ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ ಆದರೆ ನಾನು ಮತ್ತೆ ಸ್ವೀಕರಿಸಲು ಸಿದ್ಧಳಿಲ್ಲ ಎಂದರು. 
 
ಇದೇ ವೇಳೆ, ಚೆಕ್ ಹಿಂಪಡೆಯುವ ಮೂಲಕ ನಮಗೆ ಅಪಮಾನ ಮಾಡಲಾಗಿದೆ. ಆದ ಕಾರಣ ಅವಮಾನ ಸಹಿಸಿಕೊಂಡು ನಾನು ಮತ್ತೆ ಚೆಕ್ ಪಡೆಯುವುದಿಲ್ಲ. ಸರ್ಕಾರ ನೀಡುವ ಯಾವ ಪರಿಹಾರವೂ ನಮಗೆ ಬೇಡ. ನಾನು ನನ್ನ ಮಕ್ಕಳೊಂದಿಗೆ ಬದುಕಿ ತೋರಿಸುತ್ತೇನೆ ಎಂದು ಕಡ್ಡಿ ತುಂಡಾದಂತೆ ನುಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments