Select Your Language

Notifications

webdunia
webdunia
webdunia
webdunia

ಲಾಟರಿ ಹಗರಣದಲ್ಲಿ ಸರ್ಕಾರದ ಕ್ರಮ ಸರಿಯಾಗಿದೆ: ಪರಮೇಶ್ವರ್

ಲಾಟರಿ ಹಗರಣದಲ್ಲಿ ಸರ್ಕಾರದ ಕ್ರಮ ಸರಿಯಾಗಿದೆ: ಪರಮೇಶ್ವರ್
ಬೆಂಗಳೂರು , ಸೋಮವಾರ, 25 ಮೇ 2015 (15:33 IST)
ರಾಜ್ಯದಲ್ಲಿನ ಬಹುಕೋಟಿ ಹಗರಣ ಎಂದೇ ಹೇಳಲಾಗುತ್ತಿರುವ ಲಾಟರಿ ಹಗರಣ ಸಂಬಂಧ ಕರ್ನಾಟಕ ರಾಜ್ಯ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ಇದು ತೆಲಗಿ ಹಗರಣಕ್ಕಿಂತ ದೊಡ್ಡ ಮಟ್ಟದ ಹಗರಣ ಇದಾಗಿದೆ ಎಂದಿದ್ದಾರೆ. 
 
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಚರ್ಚೆಗೆ ಗ್ರಾಸವಾಗಿರುವ ಈ ಲಾಟರಿ ಹಗರಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ತೆಲಗಿ ಹಗರಣಕ್ಕಿಂತಲೂ ದೊಡ್ಡ ಮಟ್ಟದ ಅವ್ಯವಹಾರ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಅಗತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಶಿಕ್ಷೆಯಾಗಬೇಕಿದೆ ಎಂದರು. 
 
ಇದೇ ವೇಳೆ, ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಐಡಿಯಿಂದ ಸಂಪೂರ್ಣ ವರದಿ ಬಂದ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಸರ್ಕಾರ ಪ್ರಸ್ತುತ ಕೈಗೊಂಡಿರುವ ಕ್ರಮವೂ ಕೂಡ ಸರಿಯಾಗಿದೆ ಎಂದರು. 

Share this Story:

Follow Webdunia kannada