Select Your Language

Notifications

webdunia
webdunia
webdunia
webdunia

ಸರ್ಕಾರ ಮತ್ತು ಕಂದಾಯ ಇಲಾಖೆ ತನ್ನ ಹುಚ್ಚಾಟವನ್ನು ಬಿಡಲಿ: ಸುರೇಶ್ ಕುಮಾರ್

ಸರ್ಕಾರ ಮತ್ತು ಕಂದಾಯ ಇಲಾಖೆ ತನ್ನ ಹುಚ್ಚಾಟವನ್ನು ಬಿಡಲಿ: ಸುರೇಶ್ ಕುಮಾರ್
ಬೆಂಗಳೂರು , ಮಂಗಳವಾರ, 5 ಮೇ 2015 (13:53 IST)
ಕೆರೆ ಒತ್ತುವರಿಯಾಗಿದೆ ಎಂಬ ಕಾರಣದಿಂದ ಸಾರ್ವಜನಿಕರ ಆಸ್ತಿ ತೆರವಿಗೆ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಕುಮಾರ್ ಅವರು ಇಂದು ಇಲ್ಲಿನ ಬಾಣಸವಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಣಸವಾಡಿ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಹೇಳುತ್ತಿರುವ ಸರ್ಕಾರ ಸಾಮಾನ್ಯ, ಅಮಾಯಕರನ್ನು ಬೀದಿಗೆ ತಳ್ಳಲು ಮುಂದಾಗಿದೆ. 
 
ಇದು ನಡೆದಿದ್ದರೂ ಕೂಡ ಸರ್ಕಾರ ಪ್ರತ್ಯೇಕ ವಿಧೇಯಕವನ್ನು ಜಾರಿಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಅಥವಾ ಮುಂದಿನ ಕ್ರಮಕ್ಕೆ ಮುಂದಾಗಲಿ. ಆದರೆ ಅದನ್ನು ಬಿಟ್ಟು, ಸಾರ್ವಜನಿಕರು ಕಷ್ಟಪಟ್ಟು ದುಡಿದು ಕಟ್ಟಿರುವ ಮನೆಗಳನ್ನು ದಯೆ ಇಲ್ಲದೆ ನೆಲಸಮ ಮಾಡಲು ಹೊರಟಿದೆ. ಸರ್ಕಾರದ ಈ ಕ್ರಮ ಸರಿಯಲ್ಲ. ಈ ಬಗ್ಗೆ ಸದನದಲ್ಲಿ ವಿಸ್ತೃತವಾಗಿ ಚರ್ಚೆಯಾಗಲಿ. ಸರ್ಕಾರ ಮತ್ತು ಕಂದಾಯ ಇಲಾಖೆ ಹುಚ್ಚಾಟ ನಿಲ್ಲಿಸಲಿ. ಅಕ್ರಮ ಇದೆ ಎಂದು ಕಂಡು ಬಂದಲ್ಲಿ ಕಾನೂನಿಗೆ ತಿದ್ದುಪಡಿ ತರಲಿ ಎಂದು ಆಗ್ರಹಿಸಿದ ಅವರು, ಸರ್ಕಾರ ಇದಕ್ಕೆ ಮುಂದಾಗದಿದ್ದಲ್ಲಿ ಭಾರತೀಯ ಜನತಾ ಪಕ್ಷವು ಉಗ್ರ ಹೋರಾಟ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 
 
ಇದೇ ವೇಳೆ, ಸರ್ಕಾರ ಸಾಮಾನ್ಯನ ಮೇಲೆ ದೌರ್ಜನ್ಯ ಎಸಗುತ್ತಿದೆ. ಆ ಪರಿಣಾಮವನ್ನು ನಾವು ಪ್ರಸ್ತುತ ಕಾಣುತ್ತಿದ್ದು, ಸರ್ಕಾರದ ವಿರುದ್ಧ ಹೆಣ್ಣು ಮಕ್ಕಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಅನ್ಯಾಯವಾಗುತ್ತಿರುವುದು ಹೆಣ್ಣ ಮಕ್ಕಳಿಗೆ. ಆದ್ದರಿಂದ ಸರ್ಕಾರ ಮನೆ ತೆರವುಗೊಳಿಸುವ ಕರ್ತವ್ಯಕ್ಕೆ ತಡೆ ನೀಡಲಿ ಎಂದರು. 
 
ಇನ್ನು ನಗರದ ಹೆಚ್ಆರ್‌ಬಿಆರ್ ಲೇಔಟ್‌ನಲ್ಲಿರುವ ಬಾಣಸವಾಡಿ ಕೆರೆಗೆ ಸಂಬಂಧಿಸಿದ ಸುಮಾರು 711 ಎಕರೆ ಭೂಮಿಯನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕಾಣದಿಂದ ಸರ್ಕಾರವು ಆ ಜಾಗದ ತೆರವಿಗೆ ಮುಂದಾಗಿದ್ದು, ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಅಲ್ಲದೆ ಈಗಾಗಲೇ ಇಲ್ಲಿನ ಕೆಲುವು ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ  ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. 

Share this Story:

Follow Webdunia kannada