Webdunia - Bharat's app for daily news and videos

Install App

ನಾದಿನಿಯೊಂದಿಗೆ ತಂದೆಯ ಸೆಕ್ಸ್ ಕಂಡ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ

Webdunia
ಶುಕ್ರವಾರ, 21 ನವೆಂಬರ್ 2014 (15:33 IST)
ನಾದಿನಿಯೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದ ತಂದೆಯನ್ನು ನೋಡಿದ ತಪ್ಪಿಗೆ ಪುತ್ರಿ ನಸ್ರಿನ್‌ ತನ್ನ ಶೀಲವನ್ನು ಕಳೆದುಕೊಳ್ಳಬೇಕಾಯಿತಲ್ಲದೇ ಲೈಂಗಿಕ ಹಿಂಸೆಗೆ ಒಳಗಾದ ಹೇಯ ಘಟನ ಉದ್ಯಾನ ನಗರಿಯಲ್ಲಿ ನಡೆದಿದೆ. 
 
ಪುತ್ರಿ ಎಲ್ಲಿ ಅನೈತಿಕ ಸಂಬಂಧದ ವಿಷಯ ಬಹಿರಂಗಪಡಿಸುತ್ತಾಳೋ ಎನ್ನುವ ಆತಂಕದಿಂದ ತಂದೆ, ಆಕೆಗೆ ಒಂದು ವರ್ಷಗಳ ಕಾಲ ನಿರಂತರವಾಗಿ ಬೆದರಿಕೆಯೊಡ್ಡಿದ್ದಲ್ಲದೇ ಮನೆಗೆಲಸದಾಳಿನಿಂದ ಕೂಡಾ ಚಿತ್ರಹಿಂಸೆ ಕೊಡಿಸಿದ್ದಾನೆ. 
 
 ತಂದೆ ತನ್ನ ನಾದಿನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಮನೆಗೆಲಸದಾಳಿನೊಂದಿಗೂ ಅನೈತಿಕ ಸಂಬಂಧ ಹೊಂದಿದ್ದ ಘಟನೆ ನಂತರ ಬಹಿರಂಗವಾಗಿದೆ. ಮನೆಗೆಲಸದಾಳನ್ನು ತಾಯಿಯಂತೆ ಭಾವಿಸದಿದ್ದಲ್ಲಿ ಮುಖದ ಮೇಲೆ ಆಸಿಡ್ ಹಾಕುವುದಾಗಿ ತಂದೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. 
 
ಬೆಂಗಳೂರಿನ ವಸಂತನಗರದ ನಿವಾಸಿಯಾದ ನಸ್ರಿನ್‌, ತನ್ನ ತಂದೆ ವಸೀಮ್, ದೊಡ್ಡಮ್ಮ ಫಿರ್ದೂಸ್ ಮತ್ತು ಆಕೆಯ ಸಹೋದರ ತನ್ವೀರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾಳೆ.  
 
ಪತಿ ವಸೀಮ್‌ನ ಅನೈತಿಕ ಸಂಬಂಧಗಳು ನಿರಂತರವಾಗಿ ಮುಂದುವರಿದಿರುವುದನ್ನು ಕಂಡು ನಸ್ರೀನ್ ತಾಯಿ ಆತನನ್ನು ತೊರೆದು ಹೋಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಒಂದು ವರ್ಷದ ಹಿಂದೆ ನಸ್ರಿನ್ ಮಧ್ಯಾಹ್ನ ಮನೆಗೆ ಅಕಸ್ಮಿಕವಾಗಿ ಆಗಮಿಸಿದಾಗ ತಂದೆ ತನ್ನ ಸಹೋದರನ ಪತ್ನಿಯೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದಾಳೆ.   
 
ಜೀವ ಬೆದರಿಕೆ  
 
ಕೂಡಲೇ ಕೋಣೆಯಿಂದ ಹೊರಗೆ ಹೋಗಬೇಕು ಎಂದು ಹೊರಟಿದ್ದಾಗ ತಂದೆ, ನನ್ನನ್ನು ಗಟ್ಟಿಯಾಗಿ ಹಿಡಿದು ವಿಷಯವನ್ನು ನಿನ್ನ ತಾಯಿಗೆ ತಿಳಿಸಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ತನಗೆ ಮತ್ತು ತನ್ನ ತಾಯಿಯ ಮೇಲೆ ಹಲ್ಲೆ ನಡೆಯಬಹುದು ಎನ್ನುವ ಆತಂಕದಿಂದ ನಸ್ರಿನ್ ಘಟನೆಯ ಬಗ್ಗೆ ಯಾರ ಬಳಿಯೂ ಹೇಳದೆ ಮೌನವಾಗಿದ್ದಾಳೆ.
 
ಮೌನ ಮಾರಕವಾಯಿತು 
 
ನನ್ನ ತಂದೆ ಒತ್ತಾಯಪೂರ್ವಕವಾಗಿ ನಾದಿನಿಯೊಂದಿಗೆ ನಡೆಸುತ್ತಿರುವ ಸೆಕ್ಸ್ ಕೃತ್ಯವನ್ನು ನೋಡುವಂತೆ ನನಗೆ ಒತ್ತಾಯಿಸುತ್ತಿದ್ದ. ನನ್ನ ಮೇಲೆ ಕೂಡಾ ಅನೇಕ ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 
 
ನಾನು ಬಾತ್‌ರೂಮ್‌ನಲ್ಲಿದ್ದಾಗ ಮತ್ತೆ ಬಟ್ಟೆಗಳನ್ನು ಬದಲಿಸುವಾಗ ಕೂಡಾ ನನ್ನ ತಂದೆ ನನ್ನೆದುರಿಗೆ ನಿಲ್ಲುತ್ತಿದ್ದರು ಎಂದು ತನ್ನ ಅಸಹಾಯಕತೆಯನ್ನು ಬಹಿರಂಗಪಡಿಸಿದ್ದಾಳೆ.
 
ತಂದೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮುಚ್ಚಿಡಲು ದೊಡ್ಡಮ್ಮ ತನ್ನ ಸಹೋದರನಿಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಚೋದಿಸುತ್ತಿದ್ದಳು. ಆತ ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾಳೆ.
 
ತಂದೆ, ದೊಡ್ಡಮ್ಮ ಮತ್ತು ಆಕೆಯ ಸಹೋದರ ನಿರಂತರ ಕಾಟದಿಂದ ಬೇಸತ್ತ ನಸ್ರೀನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
 
ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿ (ಸೆಂಟ್ರಲ್) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ