Select Your Language

Notifications

webdunia
webdunia
webdunia
webdunia

ಸೆಲ್ಫಿ ತೆಗೆಯಲು ಹೋಗಿ ಮೃತಪಟ್ಟ ಗಿರೀಶ್ ಶವ ಹುಟ್ಟೂರಿಗೆ: ಬಂಧುಗಳ ಆಕ್ರಂದನ

ಸೆಲ್ಫಿ ತೆಗೆಯಲು ಹೋಗಿ ಮೃತಪಟ್ಟ ಗಿರೀಶ್ ಶವ ಹುಟ್ಟೂರಿಗೆ: ಬಂಧುಗಳ ಆಕ್ರಂದನ
ತುಮಕೂರು: , ಭಾನುವಾರ, 14 ಫೆಬ್ರವರಿ 2016 (13:49 IST)
ನಾಲೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಡಾ. ಗಿರೀಶ್ ಅವರ ಪಾರ್ಥಿವ ಶರೀರವನ್ನು ತುಮಕೂರಿನ ಚಿಕ್ಕಪೇಟೆಯ ಆಚಾರ್ಯ ಬೀದಿಯ ಸ್ವಗೃಹಕ್ಕೆ  ರವಾನಿಸಲಾಗಿದ್ದು, ಗಿರೀಶ್ ಮೃತದೇಹವನ್ನು ಕಂಡ ತಂದೆ, ತಾಯಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತು. 
 
ವಿಶ್ವೇಶ್ವರಯ್ಯ ನಾಲೆಯಲ್ಲಿ ನಿಂತು ಸೆಲ್ಫಿಗೆ ಫೋಸ್ ಕೊಡುತ್ತಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಅವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಬದುಕುಳಿದಿದ್ದು, ಮೃತಪಟ್ಟ ಮೂವರ ಪೈಕಿ ಗಿರೀಶ್ ಕೂಡ ಒಬ್ಬರಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ.

 ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿಯೂ ಬದುಕುಳಿದಿದ್ದ ಡಾ. ಸಿಂಧು ಹಾಗೂ ಡಾ. ಗೌತಮ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಶಾಕ್‌ನಿಂದ ಹೊರಬಂದಿಲ್ಲ. ಆದ್ದರಿಂದ ಘಟನೆಯ ಬಗ್ಗೆ ಯಾವುದೇ ವಿಚಾರಣೆ ಮಾಡಿಲ್ಲ ಎಂದು ಮಂಡ್ಯ ಮೆಡಿಕಲ್ ಕಾಲೇಜು ಅಧೀಕ್ಷಕ ಹನುಮಂತ ಪ್ರಸಾದ್ ಹೇಳಿದ್ದಾರೆ. 

Share this Story:

Follow Webdunia kannada