Webdunia - Bharat's app for daily news and videos

Install App

ಸೈಂಟ್ ಮಾರ್ಥಾಸ್‍ ವೈದ್ಯರು ಮತ್ತು ಸಿಬ್ಬಂದಿ ನಡುವೆ ಕ್ರಿಕೆಟ್

Webdunia
ಶನಿವಾರ, 11 ಫೆಬ್ರವರಿ 2017 (08:41 IST)
ಸೈಂಟ್ ಮಾರ್ಥಾಸ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಇದು ಮೋಜಿನ ಕ್ರಿಕೆಟ್ ದಿನವಾಗಿತ್ತು. ಸೈಂಟ್ ಮಾರ್ಥಾಸ್ ಪ್ರೀಮಿಯರ್ ಲೀಗ್ (ಎಸ್‍ಎಂಪಿಎಲ್) ನ 7ನೇ ಆವೃತ್ತಿ ವೈಎಂಸಿಎ ಮೈದಾನದಲ್ಲಿ ಅತ್ಯಂತ ಮೋಜಿನಿಂದ ನಡೆಯಿತು. ತಂಡಗಳು ಆಸ್ಪತ್ರೆಯ ವಿಶೇಷತೆಗಳು ಹಾಗೂ ವಿಭಾಗಗಳ ಆಧಾರದಲ್ಲಿ ಬಂದಿದ್ದವು. ಭಾಗವಹಿಸಿದ ತಂಡಗಳು ಮತ್ತು ಅವುಗಳ ಮಾಲೀಕರ ವಿವರಗಳು ಇಂತಿವೆ:
 
ಸರ್ಜಿಕಲ್ - ಡಾ.ಅರುಣ್ ಮತ್ತು ಡಾ.ಸತ್ಯಕೃಷ್ಣ (ಸರ್ಜರಿ ಎಚ್‍ಒಡಿ ಮತ್ತು ಸರ್ಜಿಕಲ್ ವಿಭಾಗದ ಯುನಿಟ್ ಮುಖ್ಯಸ್ಥರು)
ವೈದ್ಯಕೀಯ -  ಡಾ.ರವೀಂದ್ರನಾಥ್ (ಮೆಡಿಕಲ್ ಸುಪರಿಂಟೆಂಡೆಂಟ್)
ನಿರ್ವಹಣೆ - ಸಿಸ್ಟರ್ ನವೋಮಿ (ನರ್ಸಿಂಗ್ ಸುಪರಿಂಟೆಂಡೆಂಟ್)
ಸೈಂಟ್ ಮಾರ್ಥಾಸ್ ಹಾರ್ಟ್ ಸೆಂಟರ್ - ಶೈಲೇಶ್ (ನಿರ್ದೇಶಕರು, ಸೈಂಟ್ ಮಾರ್ಥಾಸ್ ಹಾರ್ಟ್ ಸೆಂಟರ್)
ಅಡ್ಮಿನ್ - ಡಾ. ಜೇಸನ್ (ಹಿರಿಯ ವೈದ್ಯಕೀಯ ಅಧಿಕಾರಿ)
ನರ್ಸಿಂಗ್ ಸಹಾಯಕರ ತಂಡ - ಸಿಸ್ಟರ್ ಪ್ರಮೀಳಾ (ಸಿಸ್ಟರ್ ಸುಪೀರಿಯರ್)
 
ಅಡ್ಮಿನ್ ತಂಡವು 15,000 ರೂ ಬಹುಮಾನದ ಮಾರ್ಥಾಸ್ ಪ್ರೀಮಿಯರ್ ಲೀಗ್‍ನ ಪ್ರಥಮ ಬಹುಮಾನ ಗೆದ್ದರೆ, ಸರ್ಜಿಕಲ್ ತಂಡವು ಸೈಂಟ್ ರನ್ನರ್ ಆಪ್ ಆಯಿತು. ಸರ್ಜಿಕಲ್ ತಂಡದ ಡಾ.ಕಿರಣ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
 
ಬಿಡ್ಡಿಂಗ್ ಆಧಾರದಲ್ಲಿ ತಂಡದ ಮಾಲೀಕತ್ವವನ್ನು ನೀಡಲಾಗಿತ್ತು. ಪ್ರತಿ ತಂಡದ ಮಾಲೀಕರು 6,000 ರೂ. ಬೆಲೆಗೆ ತಮ್ಮ ತಂಡವನ್ನು ರಚಿಸಿಕೊಳ್ಳಬೇಕಿತ್ತು. ಒಟ್ಟು ಬಹುಮಾನದ ಮೊತ್ತ 15,000 ರೂ. ಆಗಿದ್ದು ಅದನ್ನು ತಂಡದ ಮಾಲೀಕರು ಮತ್ತು ಸದಸ್ಯರು ಸಮಾನವಾಗಿ ಹಂಚಿಕೊಳ್ಳಬೇಕಿತ್ತು. ರನ್ನರ್ ಅಪ್ ತಂಡವು 12,000 ರೂ. ಪಡೆಯಿತು. ಎಲ್ಲಾ ವಿಜೇತರಿಗೆ ಗೆಲುವಿನಲ್ಲಿ ಸಂಭ್ರಮಿಸಲು ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ವಿಜೇತರು ಹಾಗೂ ರನ್ನರ್ ಅಪ್‍ಗೆ ಪದಕಗಳನ್ನೂ ವಿತರಿಸಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments