Webdunia - Bharat's app for daily news and videos

Install App

ಇಂದಿನಿಂದ ಜನವರಿ 9ರವರೆಗೆ ಅವರೆಬೇಳೆ ಮೇಳದ ಕಂಪು

Webdunia
ಗುರುವಾರ, 5 ಜನವರಿ 2023 (19:20 IST)
ಸಿಕ್ಕಾಪಟ್ಟೆ ಚಳಿ. ಕಾಫಿ , ಟೀ ಕುಡ್ದು ಕುಡ್ದು ಸಾಕಾಗಿದೆ ಅಂಥ ಅನಿಸಿದ್ರೆ ಒಮ್ಮೆ ಬಸವನಗುಡಿ ನ್ಯಾಷನಲ್ ಗ್ರೌಂಡ್ ಗೆ ಹೋಗಿ ಬನ್ನಿ .ಯಾಕೆಂದ್ರೆ ಇವತ್ತಿಂದ ಜನವರಿ 9ರವೆರೆಗೆ ಅಲ್ಲಿ ಬಗೆ ಬಗೆಯ ಅವರೆಬೇಳೆ ತಿಂಡಿಗಳು ನಿಮ್ಮ ನಾಲಿಗೆಗೆ ರುಚಿ ನೀಡೋಕೆ ಸಿದ್ಧವಾಗಿವೆ. ವಾಸವಿ ಕಾಂಡಿಮೆಂಟ್ಸ್ನಿಂದ ಪ್ರತಿವರ್ಷದಂತೆ ಈ ವರ್ಷ ಕೂಡ ಅವರೆಬೇಳೆ ಮೇಳ ಆಯೋಜಿಸಿದ್ದು, ಅವರೆಬೇಳೆ ತಿಂಡಿಗಳು ಘಮಘಮಿಸುತ್ತಿವೆ.
ಇವತ್ತಿನಿಂದ ನಡೆಯುತ್ತಿರೋ ಈ ಮೇಳಕ್ಕೆ ಸಾದಾಸೀದಾ ಗುಣದಿಂದಲೇ ಸದ್ದುಮಾಡಿರೋ ಇನ್ಫೋಸಿಸ್ ಸುಧಾಮೂರ್ತಿ ಚಾಲನೆ ನೀಡಿದ್ರು. ಅವರೆಬೇಳೆಯ ತಿಂಡಿಗಳ ರುಚಿ ಸವಿದ ಸುಧಾಮೂರ್ತಿ, ಮೇಳದಲ್ಲಿ ರೌಂಡ್ ಹಾಕಿ ಅವರೆಬೇಳೆಯ ಖಾದ್ಯಗಳನ್ನ ಕಣ್ತುಂಬಿಕೊಂಡ್ರು. ಇತ್ತ ಸುಧಾಮೂರ್ತಿಯವರಿಗೆ ನಟಿ ತಾರಾ ಅನುರಾಧ, ಸಿಹಿಕಹಿ ಚಂದ್ರು, ಭಾಸ್ಕರ್ರಾವ್ ಸೇರಿದಂತೆ ಹಲವರು ಸಾಥ್ ನೀಡಿದ್ರು. ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸುಧಾಮೂರ್ತಿ, ನಮ್ಮ ರಾಜ್ಯದ ಒಂದು ಬೆಳೆಯಿಂದ ಇಷ್ಟು ಖಾದ್ಯ ಮಾಡಬಹುದು ಅಂತ ಗೊತ್ತಿರಲಿಲ್ಲ . ರೈತರ ಶ್ರಮವನ್ನು ಉತ್ತೇಜಿಸಬೇಕು ಅಂದ್ರು .ಇನ್ನು ಮೇಳದಲ್ಲಿ ಅನ್ನದಾತ ರೈತರಿಗೆ ಸನ್ಮಾನ ಮಾಡುವ ಮೂಲಕ ಅವರೆಬೇಳೆ ಬೆಳೆಯಲು ಪ್ರೋತ್ಸಾಹವನ್ನ ಕೂಡ ನೀಡಲಾಯ್ತು. ಇನ್ನು ಕಾರ್ಯಕ್ರಮದ ಆಯೋಜಕರೂ ಕೂಡ ಅವರೆಬೇಳೆ ಮೇಳದ ಬಗ್ಗೆ ಮಾತನಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments