Select Your Language

Notifications

webdunia
webdunia
webdunia
webdunia

ಮದುವೆ ಆಗಿದ್ದು ಸಹಿಸದೆ ಸ್ನೇಹಿತೆಯನ್ನೇ ಹತ್ಯೆಗೈದ ಗೆಳತಿ

ಮದುವೆ ಆಗಿದ್ದು ಸಹಿಸದೆ ಸ್ನೇಹಿತೆಯನ್ನೇ ಹತ್ಯೆಗೈದ ಗೆಳತಿ
ಮಂಡ್ಯ , ಗುರುವಾರ, 2 ಏಪ್ರಿಲ್ 2015 (18:11 IST)
ಮದುವೆಯಾಗಿದ್ದನ್ನು ಸಹಿಸದ ಸ್ನೇಹಿತೆಯೋರ್ಳು ತನ್ನ ಸ್ನೇಹಿತೆಯನ್ನೇ ಕತ್ತು ಹಿಸುಕಿ ಹತ್ಯೆಗೈದ ಘಟನೆ ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.  
 
ಮೃತ ಸ್ನೇಹಿತೆಯನ್ನು ದಿವ್ಯಾಶ್ರೀ(23) ಎಂದು ಹೇಳಲಾಗಿದ್ದು, ಈಕೆಯನ್ನು ಸ್ನೇಹಿತೆ ಅನುಷಾ(23) ಎಂಬಾಕೆ ನಗರದ ರೇಷ್ಮೆ ಇಲಾಖೆಯ ಕಟ್ಟದ ಬಳಿ ಹತ್ಯೆಗೈದಿದ್ದಾಳೆ. ಈ ಇಬ್ಬರೂ ಕೂಡ ಹಾಲಹಳ್ಳಿ ಬಡಾವಣೆಯ ನಿವಾಸಿಗಲಾಗಿದ್ದಾರೆ. 
 
ಇನ್ನು ಪ್ರಕರಣ ಸಂಬಂಧ ಮೃತ ದಿವ್ಯಾಶ್ರೀಯ ತಂದೆ ಅನುಷಾಳ ಮೇಲೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನುಷಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹೌದು, 8 ತಿಂಗಳಿನಿಂದ ನನ್ನ ಜೊತೆ ಇದ್ದವಳು ನನ್ನ ಮಾತಿಗೆ ಬೆಲೆ ಕೊಡದೆ ಮದುವೆ ಮಾಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ನಾನೇ ಕರೆಸಿಕೊಂಡು ಕುತ್ತಿಗೆಗೆ ವೈರ್ ಬಿಗಿದು ಹತ್ಯೆಗೈದೆ ಎಂದು ಒಪ್ಪಿಕೊಂಡಿದ್ದಾಳೆ. 
 
ಇನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅನುಷಾಳನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada