ಮತದಾನ ಮಾಡಿದವರಿಗೆ ಈ ಹೋಟೆಲ್ ನಲ್ಲಿ ಊಟ, ದೋಸೆ ಫ್ರೀ

Krishnaveni K
ಗುರುವಾರ, 25 ಏಪ್ರಿಲ್ 2024 (09:30 IST)
ಬೆಂಗಳೂರು: ಮತದಾನ ಮಾಡಿದರೆ ಹೋಟೆಲ್ ಗಳಲ್ಲಿ ಉಚಿತ ಊಟ ನೀಡುವ ವಿಶೇಷ ಆಫರ್ ನಾಳೆ ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿರಲಿದೆ. ಇದಕ್ಕೆ ಹೈಕೋರ್ಟ್ ಅನುಮತಿಯೂ ಸಿಕ್ಕಿದೆ. ಇದರ ಬೆನ್ನಲ್ಲೇ ಕೆಲವು ಹೋಟೆಲ್ ಗಳು ಉಚಿತ ಊಟ, ದೋಸೆ ಆಫರ್ ನೀಡಿದೆ.

ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗದ ಜೊತೆಗೆ ಕೆಲವು ಖಾಸಗಿ ಸಂಸ್ಥೆಗಳೂ ಕೆಲವೊಂದು ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತದೆ. ಅದರಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಕೆಲವು ಹೋಟೆಲ್ ಗಳಲ್ಲಿ ಉಚಿತ ಊಟ ನೀಡಲಾಗಿತ್ತು.

ಮತದಾನ ಮಾಡಿದ್ದೇವೆ ಎಂಬ ಗುರುತಿನೊಂದಿಗೆ ಬಂದರೆ ಉಚಿತ ಊಟ ನೀಡಲಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲೂ ಕೆಲವು ಹೋಟೆಲ್ ಗಳು ಉಚಿತ ಊಟ ನೀಡಲು ಮುಂದಾಗಿದೆ. ಇದಕ್ಕೆ ಹೋಟೆಲ್ ಅಸೋಸಿಯೇಷನ್ ಗೆ ಹೈಕೋರ್ಟ್ ಅನುಮತಿಯೂ ಸಿಕ್ಕಿದೆ.

ಮತದಾರರನ್ನು ಅಮಿಷಕ್ಕೊಳಪಡಿಸದೇ ಸದುದ್ದೇಶದಿಂದ ಮತದಾನ ಮಾಡಿದವರಿಗೆ ಊಟ ನೀಡುವುದಕ್ಕೆ ಯಾವುದೇ ತೊಂದರೆಯಿಲ್ಲ ಎಂದಿದೆ. ಉಚಿತ ಊಟವಿದೆ ಎಂಬ ಕಾರಣಕ್ಕಾಗಿಯಾದರೂ ಮತದಾನ ಮಾಡಲು ಹೋಗಲಿ ಎಂಬ ಕಾರಣಕ್ಕೆ ಕೆಲವು ಹೋಟೆಲ್ ಗಳು ಇಂತಹ ಕ್ರಮಕ್ಕೆ ಮುಂದಾಗಿದೆ.

ಇದರ ಬೆನ್ನಲ್ಲೇ ನಗರದ ಕೆಲವು ಹೋಟೆಲ್ ಗಳು ದೋಸೆ, ಸಿಹಿ ತಿನಿಸು, ಊಟ ನೀಡಲು ಮುಂದಾಗಿದೆ. ವೋಟ್ ಮಾಡಿದರೆ ಊಟ ಫ್ರೀ ಎಂದು ಆಫರ್ ನೀಡಿದೆ. ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ನಲ್ಲಿ ವೋಟ್ ಮಾಡಿದ ಬಳಿಕ ಮತದಾನದ ಗುರುತಿನ ಚೀಟಿ ತೋರಿಸಿದರೆ ಉಚಿತ ದೋಸೆ, ಸಿಹಿ ತಿನಿಸು ನೀಡಲಾಗುತ್ತದೆ. ಇನ್ನಷ್ಟು ಹೋಟೆಲ್ ಗಳಲ್ಲಿ ಈ ಟ್ರೆಂಡ್ ಬರಲಿದೆ. ಇದಲ್ಲದೆ ಕೆಲವು ಆಪ್ ಆಧಾರಿತ ಕ್ಯಾಬ್ ಗಳೂ ಮತಗಟ್ಟೆಗೆ ತೆರಳಲು ಉಚಿತ ಆಫರ್ ನೀಡಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ
Show comments