Webdunia - Bharat's app for daily news and videos

Install App

ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚನೆ

Webdunia
ಸೋಮವಾರ, 13 ಸೆಪ್ಟಂಬರ್ 2021 (21:14 IST)
ಟಾಸ್ಕ್ ನೀಡಿ ಅದರಲ್ಲಿ ಪಾಸಾದವರಿಗೆ ಕಮಿಷನ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಸೂಲಿ ಮಾಡಿ ವಂಚಿಸಿರುವ ಸಂಬಂಧ ವೈಟ್‍ಫೀಲ್ಡ್ ಸಿಇಎನ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. 
ವರ್ತೂರಿನ 23 ವರ್ಷದ ಯುವಕ ವಂಚನೆಗೊಳಗಾದವ. ಈತನ ಮೊಬೈಲ್‍ಗೆ ಲಿಂಕ್ ಒಳಗೊಂಡ ಸಂದೇಶ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅಪರಿಚಿತ ವ್ಯಕ್ತಿ, ವಾಟ್ಸ್ಯಾಪ್‍ಗೆ ಸಂದೇಶ ಕಳುಹಿಸಿ ಅಮೆಜಾನ್ ಆ್ಯಪ್ ಡೌನ್‍ಲೋಡ್ ಲಿಂಕ್ ಸೆಂಡ್ ಮಾಡಿದ್ದ. ಜತೆಗೆ ಲಿಂಕ್‍ನಲ್ಲಿ ಲಾಗಿನ್ ಆಗಿ ನೋಂದಾಯಿಸಿಕೊಂಡ ಬಳಿಕ ಕೆಲವೊಂದು ಟಾಸ್ಕ್ ನೀಡಲಾಗುವುದು. ಅದನ್ನು ಪಾಸ್ ಮಾಡಿದರೆ ನಿಮಗೆ ಕಮಿಷನ್ ಬರಲಿದೆ. ಅದಕ್ಕೂ ಮೊದಲು ಲಾಗಿನ್ ಆಗಲು ಹಣ ಪಾವತಿಸಬೇಕೆಂದು ಹೇಳಿ ಒಂದು ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಬಳಿಕ ಯುವಕನಿಗೆ ಅನೇಕ ಟಾಸ್ಕ್ ಕೂಡ ಕೊಟ್ಟಿದ್ದು, ಎಲ್ಲವನ್ನೂ ಆತ ಪಾಸ್ ಮಾಡಿದ್ದ. ಆದರೆ, ಪಾಸ್ ಆದ ಮೇಲೂ ಯುವಕನಿಗೆ ಕಮಿಷನ್ ಹಣ ಬಂದಿರಲಿಲ್ಲ. ಹೀಗಾಗಿ, ಕೇಳಲೆಂದು ಟಾಸ್ಕ್ ನೀಡಿದವನಿಗೆ ಯುವಕ ಕರೆ ಮಾಡಿದ್ದಾನೆ. ಆದರೆ, ಸೈಬರ್ ಖದೀಮನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ. 
ಇದೇ ರೀತಿ ವೈಟ್‍ಫೀಲ್ಡ್‍ನ ಇಮ್ಮಡಿಹಳ್ಳಿಯ 20 ವರ್ಷದ ಯುವಕನಿಗೆ ಅರೆಕಾಲಿಕ ನೌಕರಿ ನೀಡಲಾಗುವುದು. ಜತೆಗೆ ಕಮಿಷನ್ ಕೂಡ ದೊರೆಯಲಿದೆ ಎಂದು ಆಮಿಷವೊಡ್ಡಿ ಅಮೆಜಾನ್ ಆ್ಯಪ್ ಡೌನ್‍ಲೋಡ್ ಮಾಡಿಸಿದ್ದಾರೆ. ಅದಕ್ಕೆ ಯುವಕ ಒಪ್ಪಿಕೊಂಡಾಗ ಆತನಿಂದಲೂ 1 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ. ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಸೈಬರ್ ಕ್ರೈಂ ಪೆÇಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

ಮುಂದಿನ ಸುದ್ದಿ
Show comments