Webdunia - Bharat's app for daily news and videos

Install App

ರಾಜ್ಯ ಪ್ರವಾಸಕ್ಕೆ ಸಿದ್ದವಾದ ಮಾಜಿ ಸಿಎಂ ಯಡಿಯೂರಪ್ಪ..!

Webdunia
ಗುರುವಾರ, 30 ಮಾರ್ಚ್ 2023 (21:40 IST)
ರಾಜ್ಯ ವಿಧಾನಸಭಾ ಚುನಾವಣೆಗೆ ಕೇಸರಿ ಪಡೆಯ ನಾಯಕರು ಸಕಲ ಸಿದ್ದತೆ ನಡೆಸ್ತಿದ್ದಾರೆ. ಒಂದು ಕಡೆ ಹೈಕಮಾಂಡ್ ನಾಯಕರ ಸಾಲು ಸಾಲು ಭೇಟಿ ನೀಡಿ ಒಂದು ಸುತ್ತಿನ ಪ್ರಚಾರವನ್ನ ಮುಗಿಸಿಕೊಂಡಿದ್ದಾರೆ. ಚುನಾವಣೆಗೆ ಮಹೂರ್ತ ಫಿಕ್ಸ್ ಆದ ನಂತ್ರ  ಕ್ಷೇತ್ರಗಳ ಪ್ರಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ. ಚುನಾವಣೆ ಸಿದ್ದತೆಗಳ ಬಗ್ಗೆ ಇಂದು ಬಿಎಸ್ ವೈ ಮಾಹಿತಿ ನೀಡಿದ್ರು ಜೊತೆಗೆ ಪುತ್ರ ವಿಜಯೇಂದ್ರ ಸ್ಪರ್ದೆ ಎಲ್ಲಿಂದ ಮಾಡ್ತಾರೆ ಅನ್ನೋ ಮಾಹಿತಿಯನ್ನ ನೀಡಿದ್ರು.ರಾಜ್ಯ ಚುನಾವಣೆ ದಿನಾಂಕ ಘೋಷಣೆಯಾಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದುರುತ್ತಿವೆ.ಜೆಡಿಎಸ್ ಬಿಜೆಪಿ ಕಾಂಗ್ರೆಸ್ ನ ನಾಯಕರು ಅಧಿಕಾರದ ಗದ್ದುಗೆ ಹಿಡಿಬೇಕಂತಾ ತಂತ್ರ ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ಅದ್ರಲ್ಲೂ ಕೇಸರಿ ಪಡೆಯ ನಾಯಕರು ಮತ್ತೊಮ್ಮೆ ಅಧಿಕಾರ ಹಿಡಿಯಬೇಕಂತ ರಾಜ್ಯ ಸಂಚಾರ ಹೆಚ್ಚು ಕಮ್ಮಿ ಮುಗಿಸಿದ್ದಾರೆ. ಇಗ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಸತ್ ಸದಸ್ಯರು ಕ್ಷೇತ್ರಗಳ ಪ್ರಚಾರ ಸೇರಿದಂತೆ ಗೆಲ್ಲೋದಕ್ಕೆ ಒಗ್ಗಟ್ಟಿನ ಮಂತ್ರ ಜಪ ಮಾಡೋದಕ್ಕೆ ಸಿದ್ದವಾಗಿದ್ದಾರೆ. ತಮ್ಮ ಮುಂದಿನ ಪ್ರಚಾರ ಕಾರ್ಯವೈಖರಿ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ  ನಾನು, ನಮ್ಮ ಎಲ್ಲಾ ಸಂಸತ್ ಸದಸ್ಯರು ಪ್ರಚಾರ ಮಾಡ್ತೀವಿ.ಈ ಹಿಂದೆ  ಲೋಕಸಭೆಯಲ್ಲಿ 25 ಸೀಟು ಗೆಲ್ತೀವಿ ಅಂತ ಹೇಳಿದ್ದೆ,ಅದೇ ರೀತಿ 25 ಸೀಟು ಗೆದ್ದಿದ್ದೇವೆ. ವಿಜಯ ಸಂಕಲ್ಪ ಸಮಾವೇಶ ಯಶಸ್ವಿಯಾಗಿದೆ. ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ನಿಲ್ಲಲು ಸಾಧ್ಯವೇ, ಕಾಂಗ್ರೆಸ್ ನವರು ಅಧಿಕಾರಕ್ಕೆ ಬರ್ತಿವಿ ಅಂತಾ ಹಗಲುಗನಸು ಕಾಣ್ತಿದ್ದಾರೆ ಅವರು 40-50 ಸೀಟು ಗೆಲ್ಲಲ್ಲ. ಕಾಂಗ್ರೆಸ್ ಪಕ್ಷದವರು ಅವರ ನಾಯಕರು ಯಾರು ಅಂತ ಹೇಳಲಿ ಅಂತ ಬಿಎಸ್ ವೈ ಸವಾಲಾಕಿದ್ರು

ಇನ್ನೂ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಪ್ರತಿಭಟನೆ ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಬಿಎಸ್ ವೈ, ಯಾವ ಪಕ್ಷ ನೂರಕ್ಕೂ ನೂರರಷ್ಟು ಅಧಿಕಾರಕ್ಕೆ ಬರುತ್ತದೆಆ ಪಕ್ಷದಲ್ಲಿ ಈ ರೀತಿ ವಿರೋಧ ವ್ಯಕ್ತ ವಾಗೋದು ಸಹಜ . ಈಗಾಗಲೇ ಮೂರು ಸರ್ವೆ ಆಗಿದೆ ಆದಷ್ಟು ಬೇಗ ಹೈಕಮಾಂಡ್ ನಾಯಕರು ಅಭ್ಯರ್ಥಿ ಆಯ್ಕೆ ಮಾಡ್ತಾರೆ ಕೆಲ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿರುವ ವಿಚಾರ ಯಾರಿಗೆ ಟಿಕೆಟ್ ಸಿಗಲ್ವೋ ಅವರು ಕೂಡ ಅಭ್ಯರ್ಥಿ ಪರ ಕೆಲಸ ಮಾಡ್ತಾರೆ. ಕೆಲವು ಒಂದಿಬ್ಬರು ಟಿಕೆಟ್ ಸಿಗಲ್ಲ ಅಂತಾ ಬೇರೆ ಕಡೆ ಹೋಗಿರಬಹುದು ಆದರೆ ಹಿಂದೆ ಬಿಜೆಪಿಗೆ ಬಂದ ಯಾವ ಶಾಸಕರು ಕೂಡ ಕಾಂಗ್ರೆಸ್ ಗೆ ಹೋಗಲ್ಲ ಅವರು ಎಲ್ಲರಿಗೂ ಮೋದಿ ಮೇಲೆ ಬಹಳ ನಂಭಿಕೆ ವಿಶ್ವಾಸ ಇದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು .

ಈ ಬಾರಿಯ ಚುನಾವಣೆ ಹಲವು ನಾಯಕರ‌ ಭವಿಷ್ಯ ಬರೆಯಲಿದೆ ಅನ್ನೋದು ಮೇಲ್ನೋಟಕ್ಕೆ ತಿಳಿದುಬರ್ತಿದೆ. ಅಧಿಕಾರದ ಗದ್ದುಗೆ ಏರೋದಕ್ಕೆ ತೀವ್ರ ಪೈಪೋಟಿ ಎದುರಾಗೋದು ಗ್ಯಾರಂಟಿ. ಕುಟುಂಬ ರಾಜಕೀಯಕ್ಕೆ ಫುಲ್ ಸ್ಟಾಪ್ ಹಾಕಬೇಕೆಂಬ ಬಿಜೆಪಿ ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ರಾಜ್ಯದ ನಾಯಕರಿಂದ ಯಾವ ರೀತಿ ರೆಸ್ಪಾನ್ಸ್ ಬರುತ್ತೆ, ಅದ್ರಲ್ಲೂ ಬಿಎಸ್ ವೈ ಪುತ್ರ ವಿಜಯೇಂದ್ರ, ಮಾಜಿ ಸಿಎಂ ಸಿದ್ದರಾಮಯ್ಯ ‌ವಿರುದ್ದ ವರುಣದಲ್ಲಿ‌ ಸ್ಪರ್ಧೆ ಮಾಡ್ತಾರಾ , ಮಾಜಿ ಸಿಎಂ ಸಿದ್ದು ಹೆಣೆಯಲು ಹೈಕಮಾಂಡ್ ರೂಪಿಸಿದ ರಣತಂತ್ರದಲ್ಲಿ ಯಾರು ಯಶಸ್ವಿಯಾಗ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvanshi murder: ಗಂಡನ ಕೊಲೆ ಮಾಡಿದ ಸೋನಂ ಅದೊಂದನ್ನು ಮಾತ್ರ ಬಿಟ್ಟು ಹೋಗಿದ್ದಳು

Pradeep Eshwar: ಮೋದಿ 11 ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರಿ: ಪ್ರದೀಪ್ ಈಶ್ವರ್

ಕುರ್ಚಿ ಉಳಿಸಿಕೊಳ್ಳಲು ಭಾರತದ ಜೊತೆಗೇ ಯುದ್ಧ ಮಾಡಲು ಹೊರಟಿದ್ದರಂತೆ ಬಾಂಗ್ಲಾ ಪ್ರಧಾನಿ ಯೂನಸ್

ಮುಂದಿನ ಸುದ್ದಿ
Show comments