ಮಾಜಿ ಸಿಎಂ ಸಿದ್ದರಾಮಯ್ಯನವರ ಸಹಿ ನಕಲು ಮಾಡಿದ ವಂಚಕರು ಅರೆಸ್ಟ್

Webdunia
ಶನಿವಾರ, 26 ಜನವರಿ 2019 (11:01 IST)
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನೇ ನಕಲು ಮಾಡಿದ ಆರೋಪದ ಮೇಲೆ ಇಬ್ಬರು ವಂಚಕರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.


ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗೊಳ್ಳಿ ಗ್ರಾಮದ ಸಿದ್ಧಾರೂಡ ಸಂಗೊಳ್ಳಿ  (32) ಹಾಗೂ ಅಂದಿನ ಸಿಎಂ ಕಚೇರಿಯ ಸ್ಟೆನೊಗ್ರಾಫರ್ ಆಗಿದ್ದ ಗುರುನಾಥ್ (32) ಬಂಧಿತ ಆರೋಪಿಗಳು. ಆರೋಪಿ ಸಿದ್ದಾರೂಡ, ತಿಮ್ಮಾಪುರದಲ್ಲಿ ಪರಮಾನಂದ ಅಭಿವೃದ್ಧಿ ಸಮಿತಿಯನ್ನು ರಚಿಸಿ ಸಮಿತಿಯ ಅಧ್ಯಕ್ಷ ಕೂಡ ಆಗಿದ್ದನು.  ಈತ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಹುಟ್ಟೂರಾದ ಗೋಕಾಕ್ ನ ಸಂಗೊಳ್ಳಿಯಲ್ಲಿ ಕುರುಬರ ಭವನ ನಿರ್ಮಾಣಕ್ಕೆ ಅರ್ಜಿ ಕೊಟ್ಟಿದ್ದನು. ನಂತರ ಈತ ಅಂದಿನ ಸಿಎಂ ಕಚೇರಿಯ ಸ್ಟೆನೊ ಗುರುನಾಥ್ ಜೊತೆ ಸೇರಿ ಕುರುಬರ ಸಂಘ ನಿರ್ಮಾಣಕ್ಕೆ 200 ಕೋಟಿ ಹಣ ಮಂಜೂರು ಮಾಡಿರೋದಾಗಿ ಲೆಟರ್ ಮಾಡಿ ಸಿದ್ದರಾಮಯ್ಯರ ಸಹಿ ನಕಲು ಮಾಡಿದ್ದಾನೆ.


ಈ ಬಗ್ಗೆ ಹಿಂದುಳಿದ ವರ್ಗಗಳ ಡೆಪ್ಯುಟಿ ಸೆಕ್ರೆಟರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ್ವಯ ಇದೀಗ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ಪುಸ್ತಕ 100 ರೂ ಕೊಟ್ಟು ತಗೊಂಡು ಹೋಗಿ: ಡಿಕೆ ಶಿವಕುಮಾರ್ ತಾಕೀತು

ಭ್ರಷ್ಟ, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ

Viral video: ಅಬ್ಬಬ್ಬಾ ಶಕ್ತಿಮಾನ್ ನಾಯಿಯಿದು.. ಕಾರಿನ ಸ್ಥಿತಿ ಏನು ಮಾಡಿತು ನೋಡಿ

ಅಜ್ಜಿಯ ಧೈರ್ಯವೇ ನನ್ನ ಶಕ್ತಿ: ಬಿಹಾರ ಚುನಾವಣೆ ನಂತರ ಫಸ್ಟ್ ಟೈಂ ಹೊರಗೆ ಬಂದ ರಾಹುಲ್ ಗಾಂಧಿ

ಮೋಸ ಮಾಡಿ ಗೆದ್ದ ಪ್ರಧಾನಿಗಳನ್ನು ನಾನು ಇದುವರೆಗೂ ನೋಡಿಲ್ಲ: ಮೋದಿಗೆ ಸಂತೋಷ್ ಲಾಡ್ ಟಾಂಗ್

ಮುಂದಿನ ಸುದ್ದಿ
Show comments