ಕಡಿಮೆಯಾದ ಪ್ರವಾಹ

Webdunia
ಮಂಗಳವಾರ, 3 ಆಗಸ್ಟ್ 2021 (20:03 IST)
ಕಳೆದ ಎರಡು ದಿನಗಳಿಂದ ಕೃಷ್ಣ ನದಿಯ ಪ್ರವಾಹ ಕಡಿಮೆ ಆಗಿದ್ದು,ಜನತೆಯಲ್ಲಿ ಆತಂಕ ದೂರಾಗಿದೆ.ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ಪ್ರವಾಹ ದಿಂದ ಸಂಪೂರ್ಣ ಜಲಾವೃತ ಗೊಂಡು,ಜಮಖಂಡಿ ವಿಜಯಪುರ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತು.ಈಗ ನೀರಿನ ಹರಿವು ಕಡಿಮೆ ಆಗಿದ ಪರಿಣಾಮ,ಸಂಚಾರಕ್ಕೆ ಸೇತುವೆ ಮುಕ್ತವಾಗಿದೆ.ಆದರೆ ರಸ್ತೆ ಎಲ್ಲಾ ಹಾಳಾಗಿ ಹೋಗಿದ್ದು,ಸಂಚಾರ ತೀವ್ರ ತೊಂದರೆ ಉಂಟಾಗಿದೆ.ಈ ಹಿನ್ನಲೆ ಜಮಖಂಡಿ ಶಾಸಕರಾದ ಆನಂದ ನ್ಯಾಮಗೌಡರ ಅವರು,ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸೂಚನೆ ನೀಡಿದ ಪರಿಣಾಮ ದುರಸ್ತಿ ಕಾರ್ಯ ನಡೆದಿದೆ.ಒಂದು ವಾರಕಾಲ ನೀರಿನಲ್ಲಿ ಸೇತುವೆ ಮುಳಗಡೆ ಆಗಿತ್ತು. ಈ ಸಂದರ್ಭದಲ್ಲಿ ಡಾಂಬರೀಕರಣ ಇರುವ ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿದ ಪರಿಣಾಮ ಅಲ್ಲಿಲ್ಲಿ ತಗ್ಗು ಉಂಟಾಗಿದೆ.ಲೋಕೋಪಯೋಗಿ ಇಲಾಖೆ ವತಿಯಿಂದ ಕಡಿ ಹಾಗೂ ಗಟ್ಟಿ ಮಣ್ಣು ಹಾಕಿ,ದುರಸ್ತಿ ಮಾಡುತ್ತಿದ್ದಾರೆ.ವಿಜಯಪುರ ದಿಂದ ಬೆಳಗಾವಿ ಹಾಗೂ ಧಾರವಾಡ ಗೆ ಹೋಗಲು ಜಮಖಂಡಿ ಮಾರ್ಗ ಈ ಸೇತುವೆ ಮೇಲೆ ಸಂಚಾರ ಮಾಡಬೇಕಾದ ಅನಿವಾರ್ಯ ಇತ್ತು. ಸೇತುವೆ ಮುಳಗಡೆಯಿಂದ ಸಂಚಾರ ಬಂದ್ ಆಗಿ ಸುತ್ತುವರೆದು ಸಂಚರಿಸುವ ಮೂಲಕ ಪ್ರಯಾಣಿಕರಿಗೆ ಕಿರಿಕಿರಿ ಆಗಿತ್ತು. ಈ ಹಿನ್ನಲೆಯಲ್ಲಿ ಶಾಸಕ ಸೂಚನೆ ಮೇರೆಗೆ ದುರಸ್ತಿ ಕಾರ್ಯ ಭರದಿಂದ ಸಾಗಿಸಿದೆ.ವಿಜಯಪುರ ಮಾರ್ಗ ಅಷ್ಟೇ ಅಲ್ಲದೆ ಸುತ್ತ ಮುತ್ತುಲಿನ ಗ್ರಾಮದ ಜನತೆ ಸಂಚಾರಕ್ಕೆ ಇದೇ ಸೇತುವೆ ಮಾರ್ಗವಾಗಿತ್ತು ಎಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪವಾಸ ಕೈಬಿಡಲು ಮೂರು ಷರತ್ತುಗಳನ್ನು ಹಾಕಿದ ಸೋನಮ್ ವಾಂಗ್ಚುಕ್

ಕ್ಯಾಬ್ ನಲ್ಲಿ ಯುವ ಜೋಡಿಯ ಖುಲ್ಲಾಂ ಖುಲ್ಲಾಂ ಚೆಲ್ಲಾಟ: ಚಾಲಕ ಮಾಡಿದ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್ Video

ಪೊಲೀಸ್ ಕಚೇರಿಯಲ್ಲಿ ಶವವಾಗಿ ಪತ್ತೆಯಾದ ತ್ರಿಪುರಾ ಡಿಜಿಪಿ ಅನುರಾಗ್ ಧಂಕರ್‌, ಸಾವಿನ ಸುತ್ತಾ ಹಲವು ಅನುಮಾನ

ದೆಹಲಿಯಲ್ಲಿ ಹೈಡ್ರಾಮಾ: ಮೆಟ್ರೋ ನಿಲ್ದಾಣ ನುಗ್ಗಿದ ಸಿಜೆಪಿ ಪ್ರತಿಭಟನಾಕಾರರು; ಭಾರಿ ಲಾಠಿ ಪ್ರಹಾರ, ಇಂಟರ್ನೆಟ್ ಸ್ಥಗಿತ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments