Select Your Language

Notifications

webdunia
webdunia
webdunia
webdunia

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿರುಕು: ಗ್ರಾಮಕ್ಕೆ ನೀರು ನುಗ್ಗಿ ಜೀವನ ಅಸ್ತವ್ಯಸ್ತ

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿರುಕು: ಗ್ರಾಮಕ್ಕೆ ನೀರು ನುಗ್ಗಿ ಜೀವನ ಅಸ್ತವ್ಯಸ್ತ
ಕೊಪ್ಪಳ , ಸೋಮವಾರ, 3 ಆಗಸ್ಟ್ 2015 (12:57 IST)
ಅತಿಯಾದ ಮಳೆ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂತೆ ಕಾಲುವೆಯ ದಂಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಇಲ್ಲಿನ ಸುತ್ತಮುತ್ತಲಿನ ಜಮೀನು ಹಾಗೂ ಗ್ರಾಮಕ್ಕೆ ನುಗ್ಗಿರುವ ಪರಿಣಾಮ ಅಪಾರ ಹಾನಿ ಸಂಭವಿಸಿದೆ. 
 
ಕಳೆದ ಹಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಬಳಿ ಇರುವ ಈ ನಾಲೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನೀರು ಅತಿಯಾದ ಹಿನ್ನೆಲೆ ನಾಲೆಯ ಕಟ್ಟೆ ಹೊಡೆದಿದೆ. 
 
ಈ ಘಟನೆಯು ನಿನ್ನೆ ಸಂಭವಿಸಿದ್ದು, ಒಂದು ಮೀಟರ್ ಉದ್ಧದಷ್ಟು ಕಟ್ಟೆ ಒಡೆದಿರುವ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಹೊರ ಬರುತ್ತಿದೆ. ಇಲ್ಲಿನ ಹಂಚಿನಾಳ ಗ್ರಾಮಕ್ಕೆ ಹಾಗೂ ರೈತರ ಜಮೀನಿಗೆ ನೀರು ನುಗ್ಗಿದ್ದು, ಸಾವಿರಾರು ಎಕರೆಯಲ್ಲಿನ ಬೆಳೆ ಹಾನಿಗೀಡಾಗಿದೆ. 
 
ಇನ್ನು ಘಟನೆ ತಿಳಿದು ತಾಲೂಕಿನ ಶಾಸಕರು ಹಾಗೂ ಜಲಸಂಪನ್ಮೂಲ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಸುತ್ತಿದ್ದು, ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. 

Share this Story:

Follow Webdunia kannada