ಬೆಂಗಳೂರಿನ ಯಲಹಂಕದ ಬಾಗಲೂರು ಬಳಿ ಮಹಿಳೆಯ ಸರ ಕಳವು ಮಾಡಲು ಯತ್ನಿಸಿದ ಸರಗಳ್ಳ ಅಪ್ಪಿ ಇನ್ಸ್ಪೆಕ್ಟರ್ ರಾಜೀವ್ ಎಂಬವರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಸರಗಳ್ಳನ ಮೇಲೆ ಫೈರಿಂಗ್ ಮಾಡಿದ್ದರಿಂದ ಅವನ ಕಾಲಿಗೆ ಗಾಯವಾಗಿದೆ.
ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಸರ ಕಸಿದುಕೊಂಡು ಪರಾರಿಯಾದ ಮಾಹಿತಿ ಸಿಕ್ಕಿತು. ಯಲಹಂಕ ಇನ್ಸ್ಪೆಕ್ಟರ್ ರಾಜೀವ್ ಮತ್ತು ಚಿಕ್ಕಜಾಲ ಇನ್ಸ್ಪೆಕ್ಟರ್ ಮುರಳೀಧರ್ ಇಬ್ಬರೂ ದುಷ್ಕರ್ಮಿಗಳನ್ನು ಚೇಸ್ ಮಾಡಿದಾಗ ಬೈಕ್ನಲ್ಲಿದ್ದ ಅಪ್ಪಿ ರಾಜೀವ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ.
ಆಗ ಮುರಳೀಧರ್ ಫೈರ್ ಮಾಡಿದ್ದರಿಂದ ಆರೋಪಿ ಅಪ್ಪಿ ಕಾಲಿಗೆ ಪೆಟ್ಟು ಬಿದ್ದು ಅವನು ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.