Webdunia - Bharat's app for daily news and videos

Install App

‘ರಾಜ್ಯದಲ್ಲಿ ಬೆಂಕಿ ಹಾಕಿ ದಿಲ್ಲಿಯಲ್ಲಿ ಕುಳಿತ ಗೃಹಸಚಿವ’

Webdunia
ಭಾನುವಾರ, 22 ಡಿಸೆಂಬರ್ 2019 (17:24 IST)
ರಾಜ್ಯದ ಗೃಹಸಚಿವ ಮಂಗಳೂರಲ್ಲಿ ಬೆಂಕಿ ಹಾಕಿ ದಿಲ್ಲಿಲಿ ಹೋಗಿ ಕುಳಿತಿದ್ದಾರೆ.

ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಟೀಕೆ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರಮುಖ ಎರಡು ವಿಧೇಯಕಗಳ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕ ಮೊದಲಿನಿಂದಲೂ ಶಾಂತಿ ಪ್ರಿಯ ರಾಜ್ಯ, ಇಂತಹ ರಾಜ್ಯದಲ್ಲಿ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ಗುಲ್ಬರ್ಗದಲ್ಲಿ ಶಾಂತಿ ಪ್ರತಿಭಟನೆ ನಡೆಯಿತು. ಮಂಗಳೂರಿನಲ್ಲಿ ಕರ್ಪ್ಯೂ ಇತ್ತು, ಆದರ ಹಿನ್ನೆಲೆಯಲ್ಲಿ ಇವತ್ತು ಘಟನೆ ಬಗ್ಗೆ ವಾಸ್ತವ ಅರಿಯಲು ಬಂದಿದ್ದೇನೆ ಎಂದರು.

ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ದಕ್ಷಿಣ ಕನ್ನಡ ಮೊದಲಿಂದಲೂ ಕೋಮು ಗಲಭೆ ನಡೆಯುತ್ತಿತ್ತು, ಆದರೆ ಇದು ಕೋಮು ಗಲಭೆ ಅಲ್ಲ. ಗುಂಡೇಟಿನಿಂದ ಮಾರಣಾಂತಿಕ ಗಾಯಗೊಂಡರ ಬಗ್ಗೆ ಮಾಹಿತಿ ನೀಡಿಲ್ಲ, ಇದು ಅನಾಗರಿಕ ವರ್ತನೆ ಅಂತ ಸರಕಾರದ ವಿರುದ್ಧ ಕಿಡಿಕಾರಿದ್ರು.

ರಾಜ್ಯದ ಇತರ ಕಡೆ ಶಾಂತಿಯುತ ಪ್ರತಿಭಟನೆ ಆಗಿದೆ, ಆದ್ರೆ ಮಂಗಳೂರಿನಲ್ಲಿ ಈ ರೀತಿ ಏಕೆ ಆಗಿದೆ?

ಪೊಲೀಸ್ ಇಲಾಖೆಯವರು ಯಾಕೆ ಲಾಠಿ ಚಾರ್ಜ್ ಮಾಡಿದ್ದಾರೆ? ಇಬ್ಬರು ಅಮಾಯಕರು ಬಲಿಯಾದವರು ಗಲಭೆ ಮಾಡಲು‌ ಬಂದವರೇ? ಪೊಲೀಸ್ ಇಲಾಖೆ ಕಮಿಷನರ್ ಹೇಳಿಕೆಯಲ್ಲಿ ತಪ್ಪುಗಳಿವೆ. ಮಕ್ಕಳನ್ನು ಮನೆಗೆ ಬಿಟ್ಟು ಹೊರಗೆ ಬಂದವರು ಗುಂಡೇಟಿಗೆ ಬಲಿಯಾಗಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments