Select Your Language

Notifications

webdunia
webdunia
webdunia
webdunia

ಹಣಕಾಸಿನ ವ್ಯತ್ಯಯ: ಗುಂಡಿಕ್ಕಿ ಕೊಂದ ಸ್ನೇಹಿತ

ಹಣಕಾಸಿನ ವ್ಯತ್ಯಯ: ಗುಂಡಿಕ್ಕಿ ಕೊಂದ ಸ್ನೇಹಿತ
ಬೆಂಗಳೂರು , ಗುರುವಾರ, 23 ಏಪ್ರಿಲ್ 2015 (13:56 IST)
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಮೂಡಿದ ಕಾರಣದಿಂದ ಸ್ನೇಹಿತನ ಮೇಲೆ ಗುಂಡು ಹಾರಿಸಿ ಕೊಂದ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.
 
ಘಟನೆಯಲ್ಲಿ ಮೃತಪಟ್ಟ ಸ್ನೇಹಿತರನ್ನು ಮಧು(35) ಮತ್ತು ಅಶೋಕ್(40) ಎಂದು ಹೇಳಲಾಗಿದ್ದು, ಇಬ್ಬರೂ ಕೂಡ ಕೊತ್ತನಹಳ್ಳಿ ಗ್ರಾಮ ನಿವಾಸಿಗಳೇ ಎನ್ನಲಾಗಿದೆ. ಅಶೋಕ್ ತನ್ನ ಸ್ನೇಹಿತ ಮಧುವಿನ ಮೇಲೆ ಗುಂಡು ಹಾರಿಸಿ ಕೊಂದ ಬಳಿಕ ತಾನೇ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 
ಪ್ರಕರಣದ ವಿವರ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸ್ನೇಹಿತ ಮಧು ಮನೆಗೆ ಅಶೋಕ್ ಆಗಮಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾದ ಪ್ರತಿ ವಾದಗಳು ನಡೆದು ವಾಕ್ಸಮರ ತಾರಕಕ್ಕೇರಿತ್ತು. ಪರಿಣಾಮ ಮನದ ಸ್ಥಿರತೆ ಕಳೆದುಕೊಂಡ ಅಶೋಕ್, ಏಕಾಏಕಿ ಸ್ನೇತನ ಮೇಲೆ ಎರಗಿ ಹತ್ಯೆಗೈದು ಬಳಿಕ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Share this Story:

Follow Webdunia kannada