ಬೆಂಗಳೂರಿನಲ್ಲಿ ಎಳೆಯ ವಯಸ್ಸಿನ ಅವಳಿ ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದ ಕುಮಾರೇಶ್ ಪತ್ನಿ ಎರಡು ತಿಂಗಳ ಹಿಂದೆ ತೀರಿಹೋಗಿದ್ದರು.
ಪತ್ನಿಯ ಸಾವಿನಿಂದಾಗಿ ತೀವ್ರ ನೊಂದಿದ್ದ ಕುಮಾರೇಶ್ ತನ್ನ ಇಬ್ಬರು ಮಕ್ಕಳ ಕತ್ತುಹಿಸುಕಿ ಕೊಲೆ ಮಾಡಿ ತಾನೂ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಜಾಜಿನಗರದ 5ನೇ ಬ್ಲಾಕ್ ಮನೆಯಲ್ಲಿ ವಿಜೇತಾ(4) ಮತ್ತು ದೇವಿಕಾ(4) ಎಂಬ ನಾಲ್ಕು ವರ್ಷದ ಮಕ್ಕಳನ್ನು ಕುಮಾರ್ ಕತ್ತುಹಿಸುಕಿ ಹತ್ಯೆ ಮಾಡಿದ ನಂತರ ತಾನೂ ಸಾವಿಗೆ ಶರಣಾದ. ಕುಮಾರ್ ಪತ್ನಿ ಸೋನಿ ತೀವ್ರ ಹೊಟ್ಟೆನೋವಿನ ಕಾರಣ ಮೂರುವರೆ ತಿಂಗಳ ಹಿಂದೆ ನೇಣು ಹಾಕಿಕೊಂಡು ಸತ್ತಿದ್ದರು.