Select Your Language

Notifications

webdunia
webdunia
webdunia
webdunia

ಸೊಸೆಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಮಾವ

ಸೊಸೆಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಮಾವ
ಚಿತ್ರದುರ್ಗ , ಬುಧವಾರ, 4 ಮಾರ್ಚ್ 2015 (11:34 IST)
ಸೊಸೆಯ ಶೀಲ ಶಂಕಿಸಿ ದಿವ್ಯಾ ಎಂಬವಳನ್ನು ಮಾವನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಸಂಭವಿಸಿದೆ.

ಮಾವ ಕೃಷ್ಣಪ್ಪ (58) ಸೊಸೆಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಅವಳ ಜೊತೆ ವಾಗ್ವಾದಕ್ಕೆ ಇಳಿದ. ಮಾತಿಗೆ ಮಾತು ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಮಚ್ಚನ್ನೆತ್ತಿಕೊಂಡು ಸೊಸೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೃಷ್ಣಪ್ಪ ಅವರ ಪುತ್ರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ಕೇಳಿ ಊರಿಗೆ ಧಾವಿಸಿದರು.

ಸೊಸೆಯ ಬಗ್ಗೆ ಅನುಮಾನಗೊಂಡಿದ್ದ ಮಾವ ಅವಳ ಜೊತೆ ವಾಗ್ವಾದಕ್ಕಿಳಿದಾಗ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿತ್ತು. ಸೊಸೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಮಾವ ಶಂಕಿತಗೊಂಡಿದ್ದ. ಆದರೆ ಸೊಸೆ ಅದನ್ನು ಒಪ್ಪಲು ತಯಾರಿಲ್ಲದೇ ಮಾವನ ಜೊತೆ ಜಗಳಕ್ಕೆ ಇಳಿದಿದ್ದು ಅವನಿಗೆ ಕೋಪ ತರಿಸಿತು. ಕೂಡಲೇ ಅಲ್ಲೆ ಇದ್ದ ಮಚ್ಚನ್ನು ಎತ್ತಿಕೊಂಡು ಬರ್ಬರವಾಗಿ ಸೊಸೆಯನ್ನು ಹತ್ಯೆ ಮಾಡಿದ. ಪೊಲೀಸರು ಕೃಷ್ಣಪ್ಪ ಅವರನ್ನು ಬಂಧಿಸಿ ಹೆಚ್ಚಿನ ತನಿೆಕೆ  ನಡೆಸಿದ್ದಾರೆ. 

Share this Story:

Follow Webdunia kannada