Select Your Language

Notifications

webdunia
webdunia
webdunia
webdunia

ರೈತರ ಪ್ರತಿಭಟನೆ: ಪಂಜಾಬ್‌ಗೆ ರಾಹುಲ್ ದೌಡು

ರೈತರ ಪ್ರತಿಭಟನೆ: ಪಂಜಾಬ್‌ಗೆ ರಾಹುಲ್ ದೌಡು
ನವದೆಹಲಿ , ಮಂಗಳವಾರ, 28 ಏಪ್ರಿಲ್ 2015 (15:59 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಲುವಾಗಿ ರೈಲಿನ ಮೂಲಕ ಪಂಜಾಬ್ ರಾಜ್ಯಕ್ಕೆ ತೆರಳುತ್ತಿದ್ದಾರೆ. 
 
ದೆಹಲಿ ರೈಲ್ವೆ ನಿಲ್ದಾಣದಿಂದ ಹೊರಟಿರುವ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್‌ನ ರೈತರು ಪ್ರತಿಭಟನೆ ಕೈಗೊಂಡಿದ್ದು, ಆ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಲಿದ್ದೇನೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಖನ್ನಾ ಮಂಡಿ ಗ್ರಾಮಕ್ಕೆ ರೈಲಿನ ಮುಖಾಂತರವೇ ತೆರಳುತ್ತಿರುವುದಾಗಿ ತಿಳಿಸಿದರು. 
 
ಕೇಂದ್ರ ಸರ್ಕಾರವು ಭೂಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿದ್ದು, ಇದು ರೈತ ವಿರೋಧಿ ಕಾಯಿದೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಪಂಜಾಬ್ ಗೆ ಭೇಟಿ ನೀಡುತ್ತಿದ್ದಾರೆ. 

Share this Story:

Follow Webdunia kannada