Select Your Language

Notifications

webdunia
webdunia
webdunia
webdunia

ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಬೆಳಗಾವಿ ರೈತ

ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ  ಬೆಳಗಾವಿ ರೈತ
ಬೆಳಗಾವಿ , ಶುಕ್ರವಾರ, 25 ಜುಲೈ 2014 (17:16 IST)
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕಲ್ಲೋಳ ಗ್ರಾಮದ ಬಳಿಯ ರೈತ ಸತೀಶ್ ಕಮತೆ ಪ್ರವಾಹದಲ್ಲಿ ಕೊಚ್ಚಿಹೋಗಿ ನೀರುಪಾಲಾಗಿದ್ದಾನೆ. ಕೊಚ್ಚಿಹೋದ ರೈತನ ಪತ್ತೆಗಾಗಿ ಶೋಧ ನಡೆಸಲಾಗಿದೆ. ಭಾರೀ ಮಳೆಯಿಂದ ಕೃಷ್ಣಾ ನದಿ ಉಕ್ಕಿಹರಿಯುತ್ತಿದ್ದು, ಪಂಪ್‌ಸೆಟ್‌ಗಳನ್ನು ತೆರವು ಗೊಳಿಸಿ ನದಿ ದಡಕ್ಕೆ ತರುವುದಕ್ಕೆ ಮೂರು ಜನರು ತೆರಳಿದ್ದರು.

ಆದರೆ ನದಿಯ ನೀರಿನ ಪ್ರವಾಹದಿಂದ ಕೊಚ್ಚಿಹೋಗುತ್ತಿದ್ದ  ಗುರು ಜಗೋಜಿ, ಮಲ್ಲಯ್ಯ ದೇಸಾಯಿ ಅವರನ್ನು ರಕ್ಷಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.  ಆದರೆ ರೈತ ಸತೀಶ್ ಕಮತೆ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಗ್ರಾಮಸ್ಥರು ಜಿಲ್ಲಾಡಳಿತದ ದೋಣಿಯೊಂದರಲ್ಲಿ ತೆರಳಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದರು.

 ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಅಲ್ಲಿನ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಟ್ಟಿರುವುದರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. 

Share this Story:

Follow Webdunia kannada