ಪತ್ರಕರ್ತನ ಸೋಗಿನಲ್ಲಿ ಸುತ್ತುತ್ತಿದ್ದ ನಕಲಿ ಪತ್ರಕರ್ತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡಾದ ನಿವಾಸಿ ವಿಜಯ್ ಕುಮಾರ್ ಎಂಬಾತ ಟಿವಿ9 ಖಾಸಗಿ ಸುದ್ದಿ ವಾಹಿನಿಯ ಐಡಿ ಕಾರ್ಡ್ ಹಾಗೂ ಬಸ್ ಪಾಸ್ ಮಾಡಿಸಿಕೊಂಡಿದ್ದ. ಈ ಕುರಿತು ಗ್ರಾಫಿಕ್ಸ್ ಸೆಂಟರ್ ಮಾಲೀಕರು ಬಳ್ಳಾರಿ ಟಿವಿ9 ವರದಿಗಾರರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಟಿವಿ9 ತಂಡ ಕಂಡು ನಕಲಿ ಪರ್ತಕರ್ತ ವಿಜಯ್ ಕುಮಾರ್ ಪರಾರಿಯಾಗಲು ಯತ್ನಿಸಿದ್ದಾನೆ.
ಕೈಯಲ್ಲಿ ಕತ್ತರಿ ಹಿಡಿದುಕೊಂಡು ತನ್ನ ಹಿಡಿಯಲು ಬಂದವರನ್ನು ಬೆದರಿಸಲು ಮುಂದಾಗಿದ್ದಾನೆ. ಈ ವೇಳೆ ಸ್ಥಳೀಯರು ಹಾಗೂ ಪೊಲೀಸ್ ಪೇದೆಯ ಸಹಾಯದಿಂದ ಆರೋಪಿಯನ್ನು ಹಿಡಿದು ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ.
ಆರೋಪಿ ವಿಜಯ್ ಕುಮಾರ್ನನ್ನು ವಶಕ್ಕೆ ಪಡೆದ ಬ್ರೂಸ್ ಪೇಟೆ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ