ಬೆಳಗಾವಿಯ ಶಿವಾಜಿಗಾರ್ಡನ್ ಬಳಿ ಟಾಟಾ ಏಸ್ ವಾಹನದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ದುರ್ಮರಣವಪ್ಪಿದ್ದಾರೆ. ವಿಷಾನಿಲ ಸೇವನೆಯಿಂದ ಒಬ್ಬರು ಸಾವನ್ನಪ್ಪಿದ್ದರೆ, ಸ್ಫೋಟದ ತೀವ್ರತೆಯಿಂದ ಮತ್ತೊಬ್ಬರು ಸತ್ತಿದ್ದಾರೆ. ವಾಹನ ಪಕ್ಕದಲ್ಲೇ ಹೋಗುತ್ತಿದ್ದ ರಾಜೇಂದ್ರ ಬಾಬುರಾವ್ ಪಾಟೀಲ್ ಎಂಬವರ ಮೇಲೆ ಸಿಡಿದು ಅವರು ಸಾವನ್ನಪ್ಪಿದ್ದಾರೆ.
ಟಾಟಾ ಏಸ್ನಲ್ಲಿ ಸಿಲಿಂಡರ್ ಪತ್ತೆಯಾಗಿಲ್ಲ. ಕೆಮಿಕಲ್ ಸಾಗಿಸಿರಬಹುದೆಂದು ಶಂಕಿಸಲಾಗದಿದೆ. ಟಾಟಾ ಏಸ್ನಲ್ಲಿ ಪ್ರಯಾಣಿಸುತ್ತಿದ್ದ ಮೂವರಲ್ಲಿ ಒಬ್ಬ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಸತ್ತಿದ್ದಾರೆ. ಭೀಕರ ಸ್ಫೋಟದಿಂದಾಗಿ ಅಂಗಡಿಗಳು, ಸಮೀಪದಲ್ಲಿದ್ದ ವಾಹನಗಳಿಗೆ ಜಖಂ ಆಗಿದೆ.
ವಾಹನದಲ್ಲಿದ್ದ ರಾಸಾಯನಿಕ ಸ್ಫೋಟಗೊಂಡ ಕೂಡಲೇ ಪಕ್ಕದಲ್ಲೇ ಟ್ರಾನ್ಸ್ಫಾರ್ಮರ್ಗೆ ಕೂಡ ಬೆಂಕಿ ತಗುಲಿದೆ. ಸ್ಫೋಟದ ತೀವ್ರತೆಗೆ 7 ವಾಹನಗಳಿಗೆ ಹಾನಿಯಾಗಿದೆ. ಸುತ್ತಲಿನ ಕಟ್ಟಡಗಳ ಗಾಜುಗಳು ಪುಡಿ, ಪುಡಿಯಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ವಿಧಿವಿಜ್ಞಾನ ತಜ್ಞರು ಆಗಮಿಸಿದ್ದು, ಸ್ಫೋಟದ ತನಿಖೆ ಕೈಗೊಂಡಿದ್ದಾರೆ.