Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ತಲುಪಿದ ಅಬಕಾರಿ ಸಚಿವರ ದಂಡು

ಬೆಂಗಳೂರಿಗೆ ತಲುಪಿದ ಅಬಕಾರಿ ಸಚಿವರ ದಂಡು
ಬೆಂಗಳೂರು , ಗುರುವಾರ, 29 ಜನವರಿ 2015 (13:19 IST)
ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರ ಬೆಂಬಲಿಗರ ನಿಯೋಗವು ಪ್ರಸ್ತುತ ರಾಜಧಾನಿ ಬೆಂಗಳೂರಿಗೆ ತಲುಪಿದ್ದು, ಸಚಿವ, ಸಿಎಂ ಸಿದ್ದರಾಮಯ್ಯನವರ ಆಪ್ತ ಹೆಚ್.ಸಿ.ಮಹಾದೇವಪ್ಪನವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಜಾರಕಿಹೋಳಿ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಬಂದಿರುವ ಸಚಿವರ ಬೆಂಬಲಿಗರು, ಇಂದು ನಡೆಸುತ್ತಿರುವ ಸಚಿವ ಸಂಪುಟ ಸಭೆ ಮುಕ್ತಾಯವಾದ ಬಳಿಕ ಸಂಜೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ರಾಜೀನಾಮೆ ವಿಷಯ ಸಂಬಂಧ ಚರ್ಚಿಸಲಿದ್ದಾರೆ ಎನ್ನಲಾಗಿದೆ. 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವರ ಆಪ್ತ ಹಾಗೂ ಶಾಸಕ ಫಿರೋಜ್ ಸೇಠ್, ಪ್ರಸ್ತುತ ಸಚಿವ ಹೆಚ್,ಸಿ.ಮಹಾದೇವಪ್ಪ ಅವರನ್ನು ಭೇಟಿ ಮಾಡಲು ತೆರಳುತ್ತಿದ್ದು, ಸಂಜೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ರಾಜೀನಾಮೆ ಸಂಬಂಧ ಚರ್ಚಿಸಲಾಗುವುದು ಎಂದಿದ್ದಾರೆ. 
 
ಸತೀಶ್ ಜಾರಕಿಹೋಳಿ, ಸಂಪುಟದಲ್ಲಿ ತಮಗೆ ಸೂಕ್ತ ಸ್ಥಾನಮಾನ ಲಭಿಸಿಲ್ಲ ಎಂಬ ನೋವಿನಿಂದ ತಾವು ನಿರ್ವಹಿಸುತ್ತಿದ್ದ ಅಬಕಾರಿ ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು.   

Share this Story:

Follow Webdunia kannada