Select Your Language

Notifications

webdunia
webdunia
webdunia
webdunia

ಇಷ್ಟು ದಿನ ಬಿಜೆಪಿ ನಾಯಕರು ಎಲ್ಲಿ ಹೋಗಿದ್ರಿ: ಡಿವಿಎಸ್‌ಗೆ ದೇವೇಗೌಡ ನೇರ ಪ್ರಶ್ನೆ

ಇಷ್ಟು ದಿನ ಬಿಜೆಪಿ ನಾಯಕರು ಎಲ್ಲಿ ಹೋಗಿದ್ರಿ: ಡಿವಿಎಸ್‌ಗೆ ದೇವೇಗೌಡ ನೇರ ಪ್ರಶ್ನೆ
ಬೆಂಗಳೂರು , ಶನಿವಾರ, 29 ಆಗಸ್ಟ್ 2015 (19:18 IST)
ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜೆಡಿಎಸ್ ಬೆಂಬಲಿಸಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೋರಿದ ಮನವಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಇಷ್ಟು ದಿನ ಬಿಜೆಪಿ ನಾಯಕರು ಎಲ್ಲಿಗೆ ಹೋಗಿದ್ರಿ ಎಂದು ಪ್ರಶ್ನಿಸಿದ್ದಾರೆ.
 
ಇಂದು ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ತೆರಳಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕಾಂಗ್ರೆಸ್ ಪಕ್ಷ ನಿಮ್ಮನ್ನು ಮತ್ತು ಕುಮಾರಸ್ವಾಮಿಯವರನ್ನು ಹೀನಾಯವಾಗಿ ತೆಗಳಿದೆ. ಆದ್ದರಿಂದ ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಲ್ಲಿ ಒಳ್ಳೆಯದಾಗುತ್ತಿದೆ ಎಂದು ಲಿಖಿತ ಮನವಿ ಸಲ್ಲಿಸಿದರು.
 
ನಿಮ್ಮ ಪಕ್ಷದ ಪ್ರಭಾವಿ ನಾಯಕ ಆರ್.ಅಶೋಕ್ ಜೆಡಿಎಸ್ ಕಥೆ ಮುಗಿಸುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಕೂಡಾ ನನ್ನ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಾಗ್ದಾಳಿ ನಡೆಸುವಾಗ ಜೆಡಿಎಸ್ ಪಕ್ಷದ ಅಸ್ತಿತ್ವ ಮರೆತುಹೋಗಿತ್ತೆ ಎಂದು ಕಿಡಿಕಾರಿದರು.
 
ಬಿಜೆಪಿ ನಾಯಕರಿಗೆ ನಿನ್ನೆಯವರೆಗೆ ಜೆಡಿಎಸ್ ಒಂದು ಬೇಡವಾದ ಪಕ್ಷವಾಗಿತ್ತು. ಇದೀಗ ಬಹುಮತದ ನೆನಪಾದ ಕೂಡಲೇ ದೇವೇಗೌಡರ ಮನೆ ನೆನಪಿಗೆ ಬಂತೆ ಎಂದು ಪ್ರಶ್ನಿಸಿದರು.
 
 ಜೆಡಿಎಸ್ ಪಕ್ಷದ ಸಭೆ ಕರೆದು ನಾಯಕರೊಂದಿಗೆ ಚರ್ಚಿಸಿದ ನಂತರ ಸೆಪ್ಟೆಂಬರ್ 2 ರಂದು ನನ್ನ ಅಂತಿಮ ತೀರ್ಮಾನ ತಿಳಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.    

Share this Story:

Follow Webdunia kannada