Select Your Language

Notifications

webdunia
webdunia
webdunia
webdunia

ಟಿಕೆಟ್ ಆಕಾಂಕ್ಷಿ ಕಾಲಿಗೆ ಬಿದ್ದ ಮಾಜಿ ಸಚಿವ ರೇವುನಾಯಕ್ ಬೆಳಮಗಿ

ಟಿಕೆಟ್ ಆಕಾಂಕ್ಷಿ ಕಾಲಿಗೆ ಬಿದ್ದ ಮಾಜಿ ಸಚಿವ ರೇವುನಾಯಕ್ ಬೆಳಮಗಿ
ಕಲಬುರ್ಗಿ , ಶನಿವಾರ, 6 ಫೆಬ್ರವರಿ 2016 (12:22 IST)
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಬೆಂಬಲ ನೀಡಬೇಕು ಎಂದು ಕಾಲಿಗೆ ಬಿದ್ದ ಯುವಕನೊಬ್ಬನಿಗೆ ತಾವೇ ಆತನ ಕಾಲಿಗೆ ಬಿದ್ದು ಮಾಜಿ ಸಚಿವ ಬೆಳಮಗಿ ಹೈಡ್ರಾಮಾ ಮೆರೆದಿದ್ದಾರೆ 
 
ನಗರದ ಜೇವರ್ಗಿರಸ್ತೆಯಲ್ಲಿ ನಡೆದ ಘಟನೆಯಲ್ಲಿ ಮಾಜಿ ಸಚಿವ ಬೆಳಮಗಿ ಆಗಮಿಸುತ್ತಿದ್ದಂತೆ, ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಮುಖಂಡರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಎಂದು ಕೋರಿದರು.
 
ಮಾಜಿ ಸಚಿವ ಬೆಳಮಗಿಗೆ ಚಿಂಚನಸೂರ್ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಟಿಕೆಟ್ ಆಕಾಂಕ್ಷಿಗಳು ಮುತ್ತಿಗೆ ಹಾಕಿ ತಮಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. 
 
ಸೋಮುವಾರದಂದು ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಟಿಕೆಟ್‌ಗಳನ್ನು ಅಂತಿಮಗೊಳಿಸುವುದಾಗಿ ಬಿಜೆಪಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಕಳವಳ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Share this Story:

Follow Webdunia kannada