Webdunia - Bharat's app for daily news and videos

Install App

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಜೆಸಿಬಿ ಯಂತ್ರಗಳು

Webdunia
ಮಂಗಳವಾರ, 2 ಫೆಬ್ರವರಿ 2016 (11:13 IST)
ಬೆಂಗಳೂರಿನ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ಒತ್ತುವರಿ ತೆರವು ಕಾರ್ಯನಡೆಯಿತು. ಗೋಪಾಲನ್ ಎಂಟರ್‌ಪ್ರೈಸಸ್ ಸಂಸ್ಥೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಉಪವಿಭಾಗಾಧಿಕಾರಿ ಎ.ಸಿ.ನಾಗರಾಜ್ ನೇತೃತ್ವದಲ್ಲಿ 200 ಕೋಟಿ ರೂ. ಮೌಲ್ಯದ ಜಮೀನಿನ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. 2.25 ಎಕರೆ ಜಾಗದಲ್ಲಿ ಕಾಂಪೌಂಡ್ ಕೂಡ ನಿರ್ಮಿಸಲಾಗಿತ್ತು.

ಜೆಸಿಬಿ ಯಂತ್ರದಿಂದ ಈ ಕಾಂಪೌಂಡ್ ಕೆಡುವ ಮೂಲಕ ಒತ್ತುವರಿಯಿಂದ ಜಮೀನನ್ನು ಮುಕ್ತಗೊಳಿಸಲಾಗಿದೆ. ಜಯನಗರದ ಬಳಿಯ ಭೈರಸಂದ್ರದಲ್ಲಿ ಕೂಡ 5.39 ಎಕರೆ 500 ಕೋಟಿ ರೂ. ಮೌಲ್ಯದ ಭೂಮಿಯನ್ನು ಒತ್ತುವರಿ ಮಾಡಲಾಗದಿತ್ತು. ಒತ್ತುವರಿದಾರರು ಆ ಜಮೀನನ್ನು ಇನಾಂ ಭೂಮಿ ಎಂದು ವಾದಿಸುತ್ತಿದ್ದು, ಲಕ್ಷ್ಮಮ್ಮ ಎಂಬವರು ಕಾಂಪೌಂಡ್ ನಿರ್ಮಿಸಿ ಗೇಟ್ ಹಾಕಿದ್ದರು. ಅದಕ್ಕೆ ಸರಿಯಾದ ದಾಖಲೆಗಳನ್ನು ಕೂಡ ಹಾಜರುಪಡಿಸಿರಲಿಲ್ಲ.

ಡಿಎಲ್‌ಆರ್ ಪ್ರಾಜೆಕ್ಟ್ ಎಂಬ ಖಾಸಗಿ ಸಂಸ್ಥೆ ಲಕ್ಷ್ಮಮ್ಮರಿಂದ ಜಮೀನು ಪಡೆದುಕೊಂಡು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಜಿಲ್ಲಾಡಳಿತ ಕೋರ್ಟ್ ಆದೇಶದ ಮೇಲೆ ಈ ಜಮೀನಿನ ಒತ್ತುವರಿ ತೆರವು ಮಾಡಿ ವಶಕ್ಕೆ ತೆಗೆದುಕೊಂಡಿದೆ. ನಿನ್ನೆ ರಾತ್ರಿ ಜಿಲ್ಲಾಧಿಕಾರಿ ಶಿಖಾಗೆ ಕೋರ್ಟ್ ಆದೇಶ ಬಂದ ಬಳಿಕ ಒತ್ತುವರಿ ತೆರವಿಗೆ ಕ್ರಮ ಕೈಗೊಂಡರು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments