ಬೆಳಗಾವಿ ಜಿಲ್ಲೆಯ ಖಾನಾಪುರ ಐಬಿಯಲ್ಲಿ ವಿವಿಧ ಬೂತ್ಗಳಿಗೆ ನೇಮಕಗೊಂಡ ಚುನಾವಣಾ ಸಿಬ್ಬಂದಿ ಚುನಾವಣೆ ಪೂರ್ವದಲ್ಲಿ ಭರ್ಜರಿ ಗುಂಡು, ತುಂಡು ಪಾರ್ಟಿಯಲ್ಲಿ ನಿರತರಾಗಿರುವುದು ಕಂಡುಬಂದಿದೆ. ತನಿಖಾಧಿಕಾರಿಗಳ ದಾಳಿ ವೇಳೆ ಸಿಬ್ಬಂದಿ ಕುಡಿದ ಮತ್ತಿನಲ್ಲಿದ್ದರು.
ಬೆಳಗಾವಿ ಡಿಸಿ ಎನ್. ಜಯರಾಂ ಈ ಕುರಿತು ಮಾಹಿತಿ ಪಡೆದಿದ್ದು, ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನೀಡಲಾಗುತ್ತಿದೆ.
ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ 95 ವರ್ಷದ ವೃದ್ಧ ಮಹಿಳೆ ಮುನಿಯಮ್ಮ ಇಳಿವಯಸ್ಸಿನಲ್ಲೂ ಮತಗಟ್ಟೆಗೆ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು.
ಹಿರೇಹೊನ್ನಳ್ಳಿ ಮತಗಟ್ಟೆಯಲ್ಲಿ ನಿಯಮ ಲೆಕ್ಕಿಸದೇ ಕಾರುಗಳನ್ನು ಪಾರ್ಕ್ ಮಾಡಿದ್ದ ಸಿಬ್ಬಂದಿ, ಮತದಾರರಿಗೆ ಕಾಯುವಂತೆ ಹೇಳಿ ತಾವು ಮತಗಟ್ಟೆಯೊಳಗೆ ತಿಂಡಿ ತಿನ್ನುತ್ತಿದ್ದ ದೃಶ್ಯ ಕಂಡುಬಂದಿದೆ.