Select Your Language

Notifications

webdunia
webdunia
webdunia
webdunia

ಚುನಾವಣೆ ಮುಗಿದ್ರೂ ಅನಂತಮೂರ್ತಿ, ಕಾರ್ನಾಡ್ ಫೋಟೊಗಳಿಗೆ ಮುಕ್ತಿ ಸಿಕ್ಕಿಲ್ಲ

ಚುನಾವಣೆ ಮುಗಿದ್ರೂ ಅನಂತಮೂರ್ತಿ, ಕಾರ್ನಾಡ್ ಫೋಟೊಗಳಿಗೆ ಮುಕ್ತಿ ಸಿಕ್ಕಿಲ್ಲ
, ಬುಧವಾರ, 23 ಏಪ್ರಿಲ್ 2014 (18:01 IST)
ಬೆಂಗಳೂರು: ಚುನಾವಣೆ ಮುಗಿದರೂ  ಅನಂತಮೂರ್ತಿ ಮತ್ತು ಕಾರ್ನಾಡ್ ಫೋಟೋಗಳಿಗೆ ಮುಕ್ತಿ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಫೋಟೊಗಳನ್ನು  ಕೆಲವು ಕಡೆಗಳಲ್ಲಿ ಹಳೆಯ ಸುದ್ದಿಪತ್ರಿಕೆಗಳಿಂದ ಮುಚ್ಚಲಾಗಿತ್ತು.   ಈ ಕುರಿತು ಮೇಯರ್ ಅವರನ್ನು ಕೇಳಿದಾಗ ನೀತಿ ಸಂಹಿತೆ ಸಡಿಲಿಸಿರುವ ವಿಷಯ ತಮಗೆ ಗೊತ್ತಿಲ್ಲ.

ಚುನಾವಣೆ ಆಯೋಗ ಹೇಳಿದ ಮೇಲೆ ಅದನ್ನು ತೆಗೆಯುವುದಾಗಿ ಮೇಯರ್ ಹೇಳಿದ್ದರು. ಇವರಿಬ್ಬರೂ ಸಾಹಿತಿಗಳು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರಿಂದ ನೀತಿ ಸಂಹಿತೆ ಉಲ್ಲಂಘನೆ ದೃಷ್ಟಿಯಿಂದ ಪತ್ರಿಕೆಗಳನ್ನು ಅಂಟಿಸಲಾಗಿತ್ತು. ಅನಂತಮೂರ್ತಿ ಮತ್ತು ಕಾರ್ನಾಡ್ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರಿಂದ ಬಿಜೆಪಿ ಸಾಹಿತಿಗಳ ವಿರುದ್ಧ ವಾಗ್ದಾಳಿ ನಡೆಸಿತ್ತು.

Share this Story:

Follow Webdunia kannada