Select Your Language

Notifications

webdunia
webdunia
webdunia
webdunia

ನೀತಿ ಸಂಹಿತೆ ಉಲ್ಲಂಘನೆ; ಕೋರ್ಟ್‌ಗೆ ಹಾಜರಾದ ಈಶ್ವರಪ್ಪ

ನೀತಿ ಸಂಹಿತೆ ಉಲ್ಲಂಘನೆ; ಕೋರ್ಟ್‌ಗೆ ಹಾಜರಾದ ಈಶ್ವರಪ್ಪ
ಬಳ್ಳಾರಿ , ಭಾನುವಾರ, 26 ಅಕ್ಟೋಬರ್ 2014 (11:25 IST)
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಬಳ್ಳಾರಿ 2ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದರು. 
 
2011ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಸಂಗನಕಲ್ಲು ಗ್ರಾಮದ ದೇವಸ್ಥಾನವೊಂದರಲ್ಲಿ ಪ್ರಚಾರ ಮಾಡಿದ್ದರು ಎಂದು ಈಶ್ವರಪ್ಪ, ಅಂದಿನ ಬಿಜೆಪಿ ಅಭ್ಯರ್ಥಿ ಗಾದಿಲಿಂಗಪ್ಪ, ಬಿಜೆಪಿ ಮುಖಂಡರಾದ ಶಶೀಲ್‌ ನಮೋಶಿ, ಸಂಗನಕಲ್‌, ಇಂದು ಶೇಖರ್‌, ಶಿವರಾಮರೆಡ್ಡಿ ಸೇರಿದಂತೆ 8 ಜನರ ವಿರುದ್ಧ ಧಾರ್ಮಿಕ ಸ್ಥಳಗಳ ದುರುಪಯೋಗ ತಡೆ ಕಾಯ್ದೆ ಅನ್ವಯ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 
ಇದೀಗ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರಿಂದ ಬಂಧನ ವಾರಂಟ್‌ ವಾಪಸ್‌ ಪಡೆದು ನ್ಯಾಯಾಧೀಶರು ವಿಚಾರಣೆಯನ್ನು ಅ.31ಕ್ಕೆ ಮುಂದೂಡಿದರು. 
 

Share this Story:

Follow Webdunia kannada