ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನನ್ನು ಅಣ್ಣನೇ ಹತ್ಯೆಗೈದಿದ್ದ ಘಟನೆ ಹಿನ್ನೆಲೆಯಲ್ಲಿ ಆರೋಪಿ ಅಣ್ಣನನ್ನು ನಗರದ ಪರಪ್ಪನ ಅಗ್ರಹಾರ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತನಾಗಿರುವ ಆರೋಪಿ ಅಣ್ಣನನ್ನು ತಿಮ್ಮರಾಜು ಎಂದು ಹೇಳಲಾಗಿದ್ದು, ತನ್ನ ತಮ್ಮ ವೆಂಕಟೇಶ್ನನ್ನು ಕಳೆದ ಮಾರ್ಚ್ 1ರಂದು ಹ್ತಯೆಗೈದಿದ್ದ. ಅಲ್ಲದೆ ಶವವನ್ನು ನಗರದ ರಾಯಸಂದ್ರ ಕೆರೆ ಬಳಿ ಎಸೆದಿದ್ದ. ಇದನ್ನು ಪತ್ತೆ ಹಚ್ಚಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಬಳಿಕ ವಿಚಾರಣೆಯಲ್ಲಿ ವೆಂಕಟೇಶ್ನನ್ನು ಆತನ ಅಣ್ಣನೇ ಹತ್ಯೆಗೈದಿದ್ದಾನೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಇಂದು ಬಂಧಿಸಿದ್ದಾರೆ.
ಇನ್ನು ಬಂಧಿತ ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಲಿದ್ದು, ಮುಂದಿನ ಕ್ರಮವನ್ನು ನ್ಯಾಯಾಲಯವೇ ಕೈಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.