ಸೋಮಶೇಖರ್ ರೆಡ್ಡಿ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಡಿಕೆಶಿ ಸೋಮಶೇಖರ್ ರೆಡ್ಡಿ ಮನೆಗೆ ಭೇಟಿ ಮಾಡಿರುವ ವಿಷಯದ ಬಗ್ಗೆ ಮಾತನಾಡುತ್ತಾ, ಡಿ.ಕೆ. ಶಿವಕುಮಾರ್ ಮನೆ ಮುರಿಯುವುದರಲ್ಲಿ ನಿಸ್ಸೀಮರು.
ಸಚಿವ ಡಿಕೆಶಿ ಅವರಿಂದ ಸೋಮಶೇಖರ್ ಭೇಟಿ ಅವರ ಸಂಸ್ಕೃತಿಯನ್ನು ತೋರಿಸುತ್ತದೆ, ಆದರೆ ಬಿಜೆಪಿ ಒಂದು ಸುಸಂಸ್ಕೃತವಾದ ಪಕ್ಷ ಎಂದು ಕೆ.ಎಸ್. ಈಶ್ವರಪ್ಪ ಬಳ್ಳಾರಿಯಲ್ಲಿ ಹೇಳಿಕೆ ನೀಡಿದ್ದಾರೆ.
ತಾವು ಯಾವತ್ತೂ ಅನ್ಯ ಪಕ್ಷದ ಮುಖಂಡರ ಮನೆಗೆ ಹೋಗಿಲ್ಲ.ಈ ಸಂದರ್ಭದಲ್ಲಿ ಅವರು ಡಿಕೆಶಿ ಸೋಮಶೇಖರ್ ಅವರ ಮನೆಗೆ ಭೇಟಿ ನೀಡಿರುವ ಬಗ್ಗೆ ಸರ್ವಜ್ಞ ವಚನವನ್ನು ಉದಾಹರಿಸಿ, "ಕರೆಯದೇ ಬರುವವನನ್ನು ಹಿಡಿದು......" ಎಂದು ವ್ಯಂಗ್ಯವಾಡಿದರು.
ಉಪಚುನಾವಣೆಗೆ ಅಶೋಕ್ ಉಸ್ತುವಾರಿ ವಹಿಸಿದ್ದಾರೆ ಎಂದು ಈಶ್ವರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.