Select Your Language

Notifications

webdunia
webdunia
webdunia
webdunia

ಕೆ.ಎಸ್.ಈಶ್ವರಪ್ಪರತ್ತ ಸುಳಿಯದ ಪ್ರಮುಖ ಮುಖಂಡರು

ಕೆ.ಎಸ್.ಈಶ್ವರಪ್ಪರತ್ತ ಸುಳಿಯದ ಪ್ರಮುಖ ಮುಖಂಡರು
ಮೈಸೂರು: , ಶನಿವಾರ, 6 ಮೇ 2017 (15:57 IST)
ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟೀ ಬ್ರೆಕ್‌ನಲ್ಲೂ ದೂರ ದೂರ ಉಳಿದಿದ್ದಾರೆ.
 
ಯಡಿಯೂರಪ್ಪ ಒಂದು ಟೇಬಲ್‌‌ನಲ್ಲಿ ಉಪಹಾರ ಸೇವಿಸುತ್ತಿದ್ದರೆ ಮತ್ತೊಂದು ಟೇಬಲ್‌ನಲ್ಲಿ ಈಶ್ವರಪ್ಪ ಉಪಹಾರ ಸೇವಿಸುತ್ತಿರುವುದು ಕಂಡು ಬಂದಿತು.
 
ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ರಾಜ್ಯ ಉಸ್ತುವಾರಿ ಹೊತ್ತಿರುವ ಮುರಳಿಧರ್ ರಾವ್, ಬಸವರಾಜ್ ಬೊಮ್ಮಾಯಿ ಉಪಹಾರ ಸೇವಿಸಿದರೆ, ಈಶ್ವರಪ್ಪನವರ ಸುತ್ತ ಪ್ರಮುಖ ನಾಯಕರು ಸುಳಿಯಲಿಲ್ಲ.
 
ಎರಡನೇ ಸಾಲಿನಲ್ಲಿ ಕುಳಿತಿದ್ದ ಈಶ್ವರಪ್ಪ ಅವರೊಂದಿಗೆ ಮಾತನಾಡಿದಲ್ಲಿ ಯಡಿಯೂರಪ್ಪ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಹೆದರಿಕೆಯಿಂದ ಪ್ರಮುಖ ನಾಯಕರು ಅಲ್ಲಿಂದ ಕಾಲುಕಿತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಯನ್ನು ಸಿಎಂ ಮಾಡುವುದೇ ಗುರಿ: ಮಧು ಬಂಗಾರಪ್ಪ