Select Your Language

Notifications

webdunia
webdunia
webdunia
webdunia

ಗೊಂದಲದ ಗೂಡು: ಬಿಎಸ್‌ವೈ ಸಭೆಗೆ ಈಶ್ವರಪ್ಪ ಬಣ ಗೈರು

ಗೊಂದಲದ ಗೂಡು: ಬಿಎಸ್‌ವೈ ಸಭೆಗೆ ಈಶ್ವರಪ್ಪ ಬಣ ಗೈರು
ಬೆಂಗಳೂರು , ಸೋಮವಾರ, 6 ಮಾರ್ಚ್ 2017 (13:30 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ನಡುವಿನ ಜಟಾಪಟಿ ಮುಂದುವರಿದಿದೆ. ಇಂದು ಬಿಎಸ್‌ವೈ ಕರೆದ ಸಭೆಗೆ ಈಶ್ವರಪ್ಪ ಬಣ ಗೈರು ಹಾಜರಾಗಿದೆ.
 
ಪದಾಧಿಕಾರಿಗಳ ನೇಮಕ ಗೊಂದಲವನ್ನು ಸರಿಪಡಿಸಲು ಯಡಿಯೂರಪ್ಪ ನಿರಾಸಕ್ತಿ ತೋರಿದ್ದರಿಂದ, ಈಶ್ವರಪ್ಪ ಬಣ ಸಭೆಗೆ ಗೈರು ಹಾಜರಾಗಿದೆ.
 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪದಾಧಿಕಾರಿಗಳ ನೇಮಕ ಗೊಂದಲವನ್ನು ಸರಿಪಡಿಸುವಂತೆ ಯಡಿಯೂರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು.ಈಶ್ವರಪ್ಪಗೂ ಬ್ರಿಗೆಡ್ ರಾಜಕೀಯದಿಂದ ದೂರಿವಿರಿ ಎಂದು ಸಲಹೆ ನೀಡಿದ್ದರು.
 
ಆದರೆ, ಯಡಿಯೂರಪ್ಪ ಪದಾಧಿಕಾರಿಗಳ ನೇಮಕವನ್ನು ರದ್ದುಗೊಳಿಸಲು ನಿರಾಸಕ್ತಿ ತೋರಿರುವ ಹಿನ್ನೆಲೆಯಲ್ಲಿ, ಈಶ್ವರಪ್ಪ ಮತ್ತೆ ಬ್ರಿಗೇಡ್ ಮೊರೆಹೋಗಿದ್ದಾರೆ. ಯಾವುದೇ ಕಾರಣಕ್ಕೂ ಬ್ರಿಗೇಡ್ ಸ್ಥಗಿತಗೊಳಿಸುವುದಿಲ್ಲ ಎಂದು ಈಶ್ವರಪ್ಪ ಅಬ್ಬರಿಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಕಾಲಿಕ ನಿಗೂಢ ಅಪರಾಧಗಳು( ವಿಡಿಯೋ)