Webdunia - Bharat's app for daily news and videos

Install App

ಬ್ರಿಗೇಡ್ ಹುಟ್ಟುವ ಮೊದಲೇ ಕೆಲವರಿಗೆ ನಡುಕ ಆರಂಭ: ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಲೇವಡಿ

Webdunia
ಗುರುವಾರ, 26 ಜನವರಿ 2017 (17:42 IST)
ಶ್ರೀಕೃಷ್ಣ ಹುಟ್ಟುವ ಮುನ್ನವೇ ಕಂಸನಿಗೆ ನಡುಕ ಉಂಟಾಗಿತ್ತು. ಅದರಂತೆ, ಬ್ರಿಗೇಡ್ ಹುಟ್ಟುವ ಮೊದಲೇ ಕೆಲವರಿಗೆ ನಡುಕ ಉಂಟಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಲೇವಡಿ ಮಾಡಿದ್ದಾರೆ.
 
ಕೂಡಲಸಂಗಮದಲ್ಲಿ ನಡೆಯುತ್ತಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಬಡವರು, ಶೋಷಿತರು, ಹಿಂದುಳಿದವರ ಏಳಿಗೆಯೇ ಬ್ರಿಗೇಡ್‌ನ ಟಾರ್ಗೆಟ್. ರಾಜಕೀಯ ಸಂಘಟನೆಯಾಗುವುದಿಲ್ಲ ಎಂದು ತಿರುಗೇಟು ನೀಡಿದರು.
 
ಕೂಡಲ ಸಂಗಮದಲ್ಲಿ ನೆರೆದಿರುವ ಜನ ಸ್ಯಾಂಪಲ್, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸುತ್ತೇವೆ ಎಂದು ಯಡಿಯೂರಪ್ಪಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. 
 
ರಾಯಣ್ಣ ಬ್ರಿಗೇಡ್‌ನ್ನು ಶ್ರೀ ಕೃಷ್ಣನಿಗೆ ಹೋಲಿಕೆ ಮಾಡಿದ ಈಶ್ವರಪ್ಪ, ಶ್ರೀಕೃಷ್ಣ ಹುಟ್ಟುವುದಕ್ಕೆ ಮುನ್ನ ಕಂಸನಿಗೆ ನಡುಕ ಉಂಟಾಗಿತ್ತು. ಕೃಷ್ಣ ಹುಟ್ಟಿದ 6 ತಿಂಗಳ ನಂತರ ಕಂಸ ಸತ್ತ. ಕೃಷ್ಣ ಮಣ್ಣು ತಿಂದಿರುವುದನ್ನು ತೋರಿಸುವಂತೆ ತಾಯಿ ಹೇಳಿದಾಗ ಕೃಷ್ಣ ಬಾಯಿ ತೆರೆದಾಗ ವಿಶ್ವರೂಪ ಕಾಣಿಸಿ ಆಘಾತಗೊಂಡಿದ್ದಳು. ಅದರಂತೆ, ಇಂದು ನೀವು ನನಗೆ ವಿಶ್ವರೂಪ ತೋರಿಸಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು. 
 
ಬ್ರಿಗೇಡ್ ಹುಟ್ಟುತ್ತಿದ್ದಂತೆಯೇ ಏನೋ ಆಗುತ್ತಿದೆ ಎಂದು ಕೆಲವರು ಆತಂಕಗೊಂಡಿದ್ದಾರೆ ಎಂದು ಈಶ್ವರಪ್ಪ ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌

ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್‌ಗೆ ಅಮಿತ್ ಶಾ ಎಚ್ಚರಿಕೆ

ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿ ಒತ್ತಾಯಕ್ಕೆ ಮಣಿದು ಕೇಂದ್ರದಿಂದ ಜಾತಿಗಣತಿ: ಡಿಕೆ ಶಿವಕುಮಾರ್‌

ಪಾಕಿಸ್ತಾನದ ಜೊತೆ ಮಾತುಕತೆ ಮಾಡಿ ಎಂದ ಅಮೆರಿಕಾಗೆ ಒಂದೇ ಮಾತಲ್ಲಿ ಉತ್ತರ ಕೊಟ್ಟ ಸಚಿವ ಎಸ್ ಜೈಶಂಕರ್

ಮುಂದಿನ ಸುದ್ದಿ
Show comments