ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಸಿಐಡಿ ತಂಡ ತನಿಖೆಯನ್ನು ಮುಂದುವರೆಸಿದ್ದು ಬ್ಯಾಲೆಸ್ಟಿಕ್ ತಜ್ಞರ ತಂಡ ಇಂದು ಮಡಿಕೇರಿಗೆ ಭೇಟಿ ನೀಡಿದೆ.
ಇಂದು ಮುಂಜಾನೆ 9 ಗಂಟೆಗೆ ಶ್ರೀ ವಿನಾಯಕ ಲಾಡ್ಜ್ಗೆ ಭೇಟಿ ನೀಡಿರುವ ತಂಡ ಆತ್ಮಹತ್ಯೆಗೂ ಮುನ್ನ ಗಣಪತಿ ಅವರು 2 ಸುತ್ತು ಗುಂಡು ಹಾರಿಸಿದ್ದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದೆ.
ಕೊಡಗು ಜಿಲ್ಲಾಸ್ಪತ್ರೆಗೂ ಭೇಟಿ ನೀಡಲಿರುವ ತಂಡ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಸಹ ಮಾಹಿತಿ ಪಡೆಯಲಿದ್ದಾರೆ.
ಬಳಿಕ ಜುಲೈ 7 ರಂದು ಗಣಪತಿ ಅವರ ಸಂದರ್ಶನ ನಡೆಸಿದ್ದ ಸ್ಥಳೀಯ ಸುದ್ದಿವಾಹಿನಿ ಸಿಬ್ಬಂದಿ ಮತ್ತು ಅಲ್ಲಿಗೆ ತೆರಳು ಗಣಪತಿ ಅವರು ಬಳಸಿದ್ದ ಆಟೋ ಚಾಲಕನ ಬಳಿ ಸಹ ಸಿಐಡಿ ತಂಡ ಮಾಹಿತಿ ಪಡೆಯಲಿದೆಯ
ಸಿಐಡಿ ತಂಡ ಇಂದೇ ಪ್ರಾಥಮಿಕ ವರದಿಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.