Select Your Language

Notifications

webdunia
webdunia
webdunia
webdunia

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ: ಮಡಿಕೇರಿಯಲ್ಲಿ ಬ್ಯಾಲೆಸ್ಟಿಕ್ ತಜ್ಞರ ತಂಡ

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ: ಮಡಿಕೇರಿಯಲ್ಲಿ ಬ್ಯಾಲೆಸ್ಟಿಕ್ ತಜ್ಞರ ತಂಡ
ಮಡಿಕೇರಿ , ಭಾನುವಾರ, 10 ಜುಲೈ 2016 (11:28 IST)
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಸಿಐಡಿ ತಂಡ ತನಿಖೆಯನ್ನು ಮುಂದುವರೆಸಿದ್ದು ಬ್ಯಾಲೆಸ್ಟಿಕ್ ತಜ್ಞರ ತಂಡ ಇಂದು ಮಡಿಕೇರಿಗೆ ಭೇಟಿ ನೀಡಿದೆ.
 
ಇಂದು ಮುಂಜಾನೆ 9 ಗಂಟೆಗೆ ಶ್ರೀ ವಿನಾಯಕ ಲಾಡ್ಜ್‌ಗೆ ಭೇಟಿ ನೀಡಿರುವ ತಂಡ ಆತ್ಮಹತ್ಯೆಗೂ ಮುನ್ನ ಗಣಪತಿ ಅವರು 2 ಸುತ್ತು ಗುಂಡು ಹಾರಿಸಿದ್ದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದೆ. 
 
ಕೊಡಗು ಜಿಲ್ಲಾಸ್ಪತ್ರೆಗೂ ಭೇಟಿ ನೀಡಲಿರುವ ತಂಡ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಸಹ ಮಾಹಿತಿ ಪಡೆಯಲಿದ್ದಾರೆ.
 
ಬಳಿಕ ಜುಲೈ 7 ರಂದು ಗಣಪತಿ ಅವರ ಸಂದರ್ಶನ ನಡೆಸಿದ್ದ ಸ್ಥಳೀಯ ಸುದ್ದಿವಾಹಿನಿ ಸಿಬ್ಬಂದಿ ಮತ್ತು ಅಲ್ಲಿಗೆ ತೆರಳು ಗಣಪತಿ ಅವರು ಬಳಸಿದ್ದ ಆಟೋ ಚಾಲಕನ ಬಳಿ ಸಹ ಸಿಐಡಿ ತಂಡ ಮಾಹಿತಿ ಪಡೆಯಲಿದೆಯ 
 
ಸಿಐಡಿ ತಂಡ ಇಂದೇ ಪ್ರಾಥಮಿಕ ವರದಿಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪಂಚಭೂತಗಳಲ್ಲಿ ಲೀನರಾದ ಬಂಡೆ ಪತ್ನಿ