Select Your Language

Notifications

webdunia
webdunia
webdunia
webdunia

ಕಾರ್ತಿಕ್ ನನಗೆ ಅರಿಶಿಣದ ಕೊಂಬನ್ನು ಕಟ್ಟಿದ್ದ: ಮೈತ್ರೇಯಿ ಗೌಡ

ಕಾರ್ತಿಕ್ ನನಗೆ ಅರಿಶಿಣದ ಕೊಂಬನ್ನು ಕಟ್ಟಿದ್ದ: ಮೈತ್ರೇಯಿ ಗೌಡ
ಬೆಂಗಳೂರು , ಬುಧವಾರ, 27 ಆಗಸ್ಟ್ 2014 (17:04 IST)
ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡರ ಪುತ್ರ ಕಾರ್ತಿಕ್ ನಾವಿಬ್ಬರಿದ್ದಾಗ ಅರಿಶಿಣದ ಕೊಂಬನ್ನು ಕಟ್ಟಿದ್ದ. ಇದೀಗ ವಂಚಿಸುತ್ತಿದ್ದಾನೆ ಎಂದು ನಟಿ ಮೈತ್ರೇಯಿ ಗೌಡ ಆರೋಪಿಸಿದ್ದಾರೆ.
 
ನಾನು ಕಟ್ಟಿದ ತಾಳಿಯ ಬಗ್ಗೆ ಯಾರಿಗೂ ಮಾಹಿತಿ ನೀಡಬೇಡ ಎಂದು ಕಾರ್ತಿಕ ಪ್ರಮಾಣ ಮಾಡಿಸಿದ್ದ, ನನ್ನ ತಂದೆ ತಾಯಿಯನ್ನು ಒಪ್ಪಿಸಿದ ನಂತರ ಮದುವೆಯಾಗುವುದಾಗಿ ಭರವಸೆ ನೀಡಿದ್ದನು ಎಂದು ಹೇಳಿದ್ದಾರೆ.
 
ಕಾರ್ತಿಕ್ ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದುದು ನಿಜ. ಸದಾ ಐ ಲವ್ ಯೂ ಎನ್ನುತ್ತಿದ್ದ. ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
 
ಕಾರ್ತಿಕ್ ತಾಯಿಯೊಂದಿಗೆ ಚರ್ಚಿಸಿದ್ದೇನೆ. ಆದರೆ, ಮದುವೆ ಸಾಧ್ಯವಿಲ್ಲ ಎಂದು ಅವರು ನಿರಾಕರಿಸಿ ನನಗೆ ವಂಚನೆ ಮಾಡಿರುವುದು ಆಘಾತ ತಂದಿದೆ ಕಾರ್ತಿಕ್ ಕುಟುಂಬದವರು ಏನು ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕಾರ್ತಿಕ್ ನನ್ನನ್ನು ಹಾಳು ಮಾಡಿರುವುದು ನಿಜ. ಡಿವಿಎಸ್ ಕುಟಂಬಕ್ಕೆ ಸಂಪೂರ್ಣ ವಿಷಯ ಗೊತ್ತಿದೆ. ಅವರ ಪುತ್ರ ನನಗೆ ಮೋಸ ಮಾಡಿರುವುದು ಕೂಡಾ ಅವರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
 
  

Share this Story:

Follow Webdunia kannada