Select Your Language

Notifications

webdunia
webdunia
webdunia
webdunia

ಕಾರ್ತಿಕ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತದೆ: ಸಚಿವ ಸದಾನಂದ ಗೌಡ

ಕಾರ್ತಿಕ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತದೆ: ಸಚಿವ ಸದಾನಂದ ಗೌಡ
ಗುಲ್ಬರ್ಗಾ , ಬುಧವಾರ, 17 ಸೆಪ್ಟಂಬರ್ 2014 (10:13 IST)
ತಮ್ಮ ಮಗ ಕಾರ್ತೀಕ್  ವಿರುದ್ಧ ದಾಖಲಾಗಿರುವ  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಕೇಂದ್ರ ರೇಲ್ವೇ ಸಚಿವ ಸದಾನಂದ ಗೌಡ ನಿರಾಕರಿಸಿದ್ದಾರೆ. 


 
ಗುಲ್ಬರ್ಗಾದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ  ಡಿವಿಎಸ್ "ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ನಾನೇನು ಹೇಳಲಾರೆ. ಪ್ರಕರಣ ಮುಗಿದ ನಂತರವೇ ಈ ಕುರಿತು ಪ್ರತಿಕ್ರಿಯಿಸುತ್ತೇನೆ. "ಕಾರ್ತಿಕ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ನಾನು ಮಧ್ಯ ಪ್ರದೇಶ ಮಾಡಲಾರೆ. ಸತ್ಯಾಂಶ ಏನೆಂದು ಜನರಿಗೆ ತಿಳಿದಿದೆ" ಎಂದು  ಹೇಳಿದ್ದಾರೆ. 
 
ಡಿವಿಎಸ್ ಪುತ್ರ ಕಾರ್ತಿಕ್ ಮೇಲೆ ನಟಿ, ಮಾಡೆಲ್ ಮೈತ್ರಿಯಾ ವಂಚನೆ, ಅಪಹರಣ, ಅತ್ಯಾಚಾರದ ಆರೋಪವನ್ನು ಹೊರಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.  

Share this Story:

Follow Webdunia kannada