Webdunia - Bharat's app for daily news and videos

Install App

ಮೊಬೈಲ್ ಪೋನ್‌ನಿಂದಾಗಿ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ: ಸಿಎಂ

Webdunia
ಬುಧವಾರ, 28 ಡಿಸೆಂಬರ್ 2016 (12:29 IST)
ಮೊಬೈಲ್ ಪೋನ್‌ನಿಂದಾಗಿ ರಾತ್ರಿ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೀಗಾಗಿ ಮೊಬೈಲ್ ಪೋನ್ ಇಟ್ಟುಕೊಳ್ಳುವುದನ್ನೆ ಬಿಟ್ಟು ಬಿಟ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ಬಿಬಿಎಂಪಿಯ ನಾಗರಿಕ ಸೇವೆಗಳ ಸರಳೀಕರಣ, ಇ-ಆಡಳಿತದ ಉಪಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಹತ್ತಿರ ಒಂದು ಮೊಬೈಲ್ ಪೋನ್ ಇತ್ತು. ಆ ಪೋನ್‌ನ್ನು ಮೂರು ತಿಂಗಳು ಮಾತ್ರ ಬಳಸಿದ್ದೆ. ರಾತ್ರಿಯೂ ಸಹ ಹತ್ತಾರು ಕರೆಗಳು ಬರುತ್ತಿತ್ತು. ಇಂತಹ ರಗಳೆಯೇ ಬೇಡ ಎಂದು ಮೊಬೈಲ್ ಪೋನ್ ಇಟ್ಟುಕೊಳ್ಳುವುದನ್ನೆ ಬಿಟ್ಟು ಬಿಟ್ಟೆ. ಆದರೆ, ಈಗ ಎಲ್ಲರೂ ಡಿಜಿಟಲ್ ಇಂಡಿಯಾ ಬಗ್ಗೆ ಹೇಳುತ್ತಿದ್ದಾರೆ. ನನ್ನ ಬಳಿ ಮೊಬೈಲ್ ಪೋನ್ ಇಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಟಾಂಗ್ ನೀಡಿದರು. 
 
ಕಾರ್ಯಕ್ರಮ ಉದ್ದೇಶಿಸಿ ಇದಕ್ಕೂ ಮುಂಚೆ ಮಾತನಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್, ದೇಶದಲ್ಲಿ 20 ವರ್ಷಗಳ ಅಂತರದಲ್ಲಿ ಮೂರು ಕ್ರಾಂತಿಗಳು ನಡೆದಿವೆ. ಅದರಲ್ಲಿ ಮೊಬೈಲ್ ಕ್ರಾಂತಿಯೂ ಒಂದು. ದೇಶದಲ್ಲಿ ಪ್ರಸ್ತುತ 120 ಕೋಟಿ ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments