Webdunia - Bharat's app for daily news and videos

Install App

ಬಾಂಬ್ ಇದೆ ಎಂದು ಸಿಎಂರತ್ತ ಚಾಕಲೇಟು ಕವರ್ ಎಸೆದ ಪಾನಮತ್ತ ವ್ಯಕ್ತಿ

Webdunia
ಭಾನುವಾರ, 21 ಫೆಬ್ರವರಿ 2016 (13:18 IST)
ಬಾಂಬ್ ಇದೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವ್ಯಕ್ತಿಯೊಬ್ಬ ಕವರ್ ಎಸೆದ ಘಟನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದೆ. ಆರೋಪಿಯನ್ನು ಸವಿತಾ ಸಮಾಜದ ಬಿ.ಹೆಚ್. ಪ್ರಸಾದ್ ಎಂದು ಗುರುತಿಸಲಾಗಿದ್ದು, ಆತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.  
 
ಸಮಾರಂಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಲು ಸಿಎಂ ಪ್ರಾರಂಭಿಸಿದಾಗ ಬಾಲ್ಕನಿಯಲ್ಲಿ ನಿಂತಿದ್ದ ಪ್ರಸಾದ್ ಕೂಗಾಡುತ್ತ ಭಾಷಣಕ್ಕೆ ಅಡ್ಡಿ ಪಡಿಸಲು ಪ್ರಯತ್ನಿಸಿದ್ದಾನೆ. ನಮ್ಮ ಸಮಾಜಕ್ಕೆ ಏನು ಮಾಡಿರುವಿರಿ ಎಂದು ಹೇಳಿ, ಬಳಿಕ ಮಾತನಾಡಿ ಎಂದು ಆತ ಸಿಎಂ ಅವರಿಗೆ ಆಗ್ರಹಿಸಿದ್ದಾನೆ. ಯಾವುದಪ್ಪ ನಿಮ್ಮ ಸಮಾಜ ಎಂದು ಸಿಎಂ ಮರುಪ್ರಶ್ನಿಸಿದಾಗ ತನ್ನ ಕೈಯ್ಯಲ್ಲಿದ್ದ ಕವರ್‌ನ್ನು ಸಿಎಂ ಎಡೆಗೆ ಎಸೆದಿದ್ದಾನೆ. ಒಂದು ಕ್ಷಣ ಅಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣ ಸಿಎಂ ಅವರನ್ನು ಸುತ್ತುವರೆದ ಪೊಲೀಸರು ಕವರ್‌ನ್ನು ಪರಿಶೀಲನೆ ಮಾಡಿದಾಗ ಅದು ಚಾಕಲೇಟು ಮತ್ತು ಹೂ ತುಂಬಿದ್ದ ಕವರ್  ಎಂದು ತಿಳಿದು ಬಂದಿದೆ. 
 
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಜಾಪ್ರಭುತ್ವದಲ್ಲಿ ಇವೆಲ್ಲ ಸಾಮಾನ್ಯ, ಯಾವ ಸಮಾಜಕ್ಕೆ ಅನ್ಯಾಯವಾಗಿದೆಯೋ ಅದನ್ನು ಸರಿಪಡಿಸೋಣ ಎಂದು ಹೇಳಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments