Webdunia - Bharat's app for daily news and videos

Install App

ಡ್ರಗ್ ಪೆಡ್ಲರ್ ವಿಕಾಸ್ ಮೋದಿಯವರ 'ವಿಕಸಿತ ಭಾರತ'ದ ಕೊಡುಗೆಯೇ: ಕಾಂಗ್ರೆಸ್ ಪ್ರಶ್ನೆ

Sampriya
ಬುಧವಾರ, 24 ಜುಲೈ 2024 (19:13 IST)
Photo Courtesy X
ಬೆಂಗಳೂರು: ಗುಜರಾತಿನಲ್ಲಿ ಬಿಜೆಪಿ ಮುಖಂಡ ವಿಕಾಸ್ ಅಹಿರ್ ಡ್ರಗ್ ದಂಧೆ ನಡೆಸಿ ಸಿಕ್ಕಿಬಿದ್ದಿದ್ದಾನೆ, ದೇಶದೊಳಗೆ ಅತಿ ಹೆಚ್ಚು ಡ್ರಗ್ಸ್ ನುಸುಳುವುದು ಗುಜರಾತಿನ ಬಂದರುಗಳಿಂದಲೇ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದೆ.

ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ವಿಕಾಸ್ ಅಹಿರ್ ಎಂದು ಗುರುತಿಸಲಾಗಿದ್ದು, ಆತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಹಲವಾರು ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಇದೀಗ ಬಿಜೆಪಿ ನಾಯಕರ ಜತೆಗೆ ವಿಕಾಸ್ ನಿಂತಿರುವ ಫೋಟೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯನ್ನು ಲೇವಡಿ ಮಾಡಿದೆ.

ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಡ್ರಗ್‌ ಪ್ಲೆಡರ್, ಆರೋಪಿ ವಿಕಾಸ್ ಅಹಿರ್ ಬಂಧನದ ನಂತರ ಗುಜರಾತ್ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿ ನಡೆಯುತ್ತಿದೆ. ಆತ ಬಿಜೆಪಿಯ ಮುಂಚೂಣಿ ಕಾರ್ಯಕರ್ತ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಗುಜರಾತಿನಲ್ಲಿ ಬಿಜೆಪಿ ಮುಖಂಡ ವಿಕಾಸ್ ಅಹಿರ್ ಡ್ರಗ್ ದಂಧೆ ನಡೆಸಿ ಸಿಕ್ಕಿಬಿದ್ದಿದ್ದಾನೆ, ದೇಶದೊಳಗೆ ಅತಿ ಹೆಚ್ಚು ಡ್ರಗ್ಸ್ ನುಸುಳುವುದು ಗುಜರಾತಿನ ಬಂದರುಗಳಿಂದಲೇ.

ಈ ಡ್ರಗ್ ಪೆಡ್ಲರ್ ವಿಕಾಸ್ ಮೋದಿಯವರ 'ವಿಕಸಿತ ಭಾರತ'ದ ಕೊಡುಗೆಯೇ ಬಿಜೆಪಿ ಕರ್ನಾಟಕ

ಗುಜರಾತಿನ ಬಹುತೇಕ ಸಚಿವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಈತ ಯೋಗಿ ಆದಿತ್ಯನಾಥ್ ರ ಹಿಂದೂ ಯುವವಾಹಿನಿ ಎಂಬ ಸಂಘಟನೆಯ ಗುಜರಾತ್ ಘಟಕದ ಅಧ್ಯಕ್ಷನಂತೆ, ಬಹುಶಃ ಯುವ ಸಮುದಾಯವನ್ನು ಮಾದಕವಸ್ತುಗಳ ದಾಸರನ್ನಾಗಿಸುವುದೇ ಬಿಜೆಪಿ ಹಾಗೂ ಯೋಗಿಯ ಧರ್ಮ ರಕ್ಷಣೆಯ ಕೈಂಕರ್ಯ ಇರಬಹುದೇನೋ!?<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಮುಂದಿನ ಸುದ್ದಿ
Show comments