Select Your Language

Notifications

webdunia
webdunia
webdunia
webdunia

ಸ್ಮಾರಕ ನಿರ್ಮಾಣದಿಂದ ಜನರ ಹೃದಯಗಳಲ್ಲಿ ಡಾ.ರಾಜ್ ಚಿರಸ್ಥಾಯಿ: ಚಿರಂಜೀವಿ

ಸ್ಮಾರಕ ನಿರ್ಮಾಣದಿಂದ ಜನರ ಹೃದಯಗಳಲ್ಲಿ ಡಾ.ರಾಜ್ ಚಿರಸ್ಥಾಯಿ: ಚಿರಂಜೀವಿ
ಬೆಂಗಳೂರು , ಶನಿವಾರ, 29 ನವೆಂಬರ್ 2014 (12:06 IST)
ರಾಜ್  ಸ್ಮಾರಕದ ಅನಾವರಣ ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರರಂಗದ ನಟ ಚಿರಂಜೀವಿ ಮಾತನಾಡುತ್ತಾ ವೇದಿಕೆ ಮೇಲಿದ್ದ ಎಲ್ಲರಿಗೂ ಧನ್ಯವಾದ ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಸೌಭಾಗ್ಯ ಎಂದು ಹೇಳಿದರು.

 ಡಾ. ರಾಜ್‌ಕುಮಾರ್ ಅವರು ಮಹಾನ್ ತಾರೆಯಾಗಿದ್ದು, ಅವರು ಅತ್ಯಂತ ಸರಳಜೀವಿ ಎಂದು ಬಣ್ಣಿಸಿದರು. ಇಂತಹ ಸ್ಮಾರಕಗಳ ನಿರ್ಮಾಣದಿಂದ ಡಾ.ರಾಜ್ ಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನೆಲೆಸುತ್ತಾರೆ ಎಂದು ಚಿರಂಜೀವಿ ಹೇಳಿದರು. ಸರ್ಕಾರದಿಂದ ಡಾ.ರಾಜ್ ಅವರಿಗೆ ಒಳ್ಳೆಯ ಗೌರವ ಸಲ್ಲಿಕೆಯಾಗಿದೆ.

ನಾನು ಫಿಲ್ಮ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿದ್ದಾಗ ಡಾ.ರಾಜ್ ಅವರನ್ನು ನೋಡುತ್ತಿದ್ದೆ.  ಡಾ. ರಾಜ್ ಅವರ ಎದುರು ನಾನು ತೆಲುಗಿನವನು ಎಂದು ಹೇಳಿದಾಗ ತೆಲುಗಿನಲ್ಲೇ ಮಾತನಾಡಿಸಿದರು.

ತೆಲುಗಿನವರು ಎಲ್ಲರೂ ಚೆನ್ನಾಗಿದ್ದಾರಾ ಎಂದು ಕೇಳಿದರು. ರಾಜ್ ಅವರ ನಯವಿನಯ ಕಂಡು  ನಮಗೆ ಅಚ್ಚರಿ ಉಂಟಾಯ್ತು ಎಂದು ಹೇಳಿದರು. ಡಾ. ರಾಜ್ ಅವರ ಸರಳತೆ, ವಿನಯ ಅವರನ್ನು ಮಹಾನ್ ತಾರೆಯನ್ನಾಗಿಸಿದೆ ಎಂದು ಬಣ್ಣಿಸಿದರು.  

Share this Story:

Follow Webdunia kannada