ಅಪರಿಚಿತ ವ್ಯಕ್ತಿಗಳ ಗುಂಡಿಗೆ ಬಲಿಯಾದ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ತಂದೆಯ ಹತ್ಯೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಣಕ್ಕಾಗಿ ಸತ್ಯವನ್ನು ಮುಚ್ಚಿಡಬೇಡಿ ಎಂದು ಸಲಹೆ ನೀಡುತ್ತಿರುವುದಾಗಿ ಕಲಬುರ್ಗಿಯವರ ಪುತ್ರಿ ರೂಪದರ್ಶಿ ತಿಳಿಸಿದ್ದಾರೆ.
ತಂದೆಯವರು ತಮ್ಮ ಮನಸ್ಸಿಗೆ ತೋಚಿದ್ದನ್ನು ನಿರ್ಭಿತಿಯಿಂದ ಹೇಳುತ್ತಿದ್ದರು. ಅವರಿಗೆ ಯಾರ ಬಗ್ಗೆಯೂ ಅಸಮಾಧಾನವಿರಲಿಲ್ಲ. ಕೇವಲ ಸತ್ಯಕ್ಕಾಗಿ ಮಾತ್ರ ಹೋರಾಟ ಮುಂದುವರಿಸಿದ್ದರು ಎಂದು ಹೇಳಿದ್ದಾರೆ.
ತಂದೆಯವರ ಸಾವಿನಿಂದ ಸಂಪೂರ್ಣ ರಾಜ್ಯ. ಆಘಾತಗೊಂಡಿದೆ. ಅಂಬಳಿ ಕಂಬಳಿ ಮಾತ್ರ ಆಸ್ತಿ ಉಳಿದಿದ್ದು ಜಾಸ್ತಿ ಎಂದು ಹೇಳುತ್ತಿದ್ದರು, ಮನೆಯಲ್ಲಿ ಯಾವುದೇ ಕೌಟಂಬಿಕ ಸಮಸ್ಯೆಗಳಿರಲಿಲ್ಲ. ಶಾಂತಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ನಮ್ಮ ತಂದೆಗೆ ಕುಟುಂಬದಲ್ಲಿ ಯಾರೂ ಶತ್ರುಗಳಿರಲಿಲ್ಲ. ಜೀವ ಬೆದರಿಕೆ ಕರೆಗಳು ಬಂದಿರಲಿಲ್ಲ. ಹೊರಗಿನ ವ್ಯಕ್ತಿಗಳೇ ಅವರ ಹತ್ಯೆ ಮಾಡಿರಬಹುದು ಎಂದು ರೂಪದರ್ಶಿ ತಮ್ಮ ಸಂಶಯ ವ್ಯಕ್ತಪಡಿಸಿದ್ದಾರೆ.