Select Your Language

Notifications

webdunia
webdunia
webdunia
webdunia

ಹಕ್ಕಬುಕ್ಕರು ರಾಷ್ಟ್ರವನ್ನು ಕಟ್ಟಿದವರು ಎನ್ನುವುದು ತಿಳಿಯದ ಕುಮಾರಸ್ವಾಮಿ: ಡಿಕೆಶಿ ಲೇವಡಿ

ಹಕ್ಕಬುಕ್ಕರು ರಾಷ್ಟ್ರವನ್ನು ಕಟ್ಟಿದವರು ಎನ್ನುವುದು ತಿಳಿಯದ ಕುಮಾರಸ್ವಾಮಿ: ಡಿಕೆಶಿ ಲೇವಡಿ
ಮಂಗಳೂರು , ಶನಿವಾರ, 16 ಜುಲೈ 2016 (18:49 IST)
ಹಕ್ಕಬುಕ್ಕರು ರಾಷ್ಟ್ರವನ್ನು ಕಟ್ಟಿದವರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಈ ವಿಚಾರ ಗೊತ್ತಿರದಿರುವುದು ವಿಪರ್ಯಾಸ ಎಂದು ಮಂಡ್ಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡ್ಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಕ್ಕಬುಕ್ಕರ ಇತಿಹಾಸ ಗೊತ್ತಿಲ್ಲವೆಂದು ಕಾಣಿಸುತ್ತದೆ. ಹಕ್ಕಬುಕ್ಕರು ರಾಷ್ಟ್ರವನ್ನು ಕಟ್ಟಿದವರು. ಈ ವಿಚಾರ ಅವರಿಗೆ ತಿಳಿಯದಿರುವುದು ವಿಪರ್ಯಾಸ ಎಂದು ವ್ಯಂಗ್ಯವಾಡಿದರು.  
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಸೂಟಕೇಸ್ ತುಂಬಿಸಿ ದೆಹಲಿಗೆ ಕೊಟ್ಟು ಬರುವ ಹಕ್ಕಬುಕ್ಕರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿ ನೀಡದ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಯಾವುದೇ ಸೂಟ್‌ಕೇಸ್ ಸಂಸ್ಕೃತ್ತಿ ಇಲ್ಲ. ಎಚ್‌ಡಿ.ಕುಮಾರಸ್ವಾಮಿ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
 
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಸತ್ತ ಹೆಣದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಮಾಡುತ್ತಿದೆ. ಸಿಐಡಿ ತನಿಖೆಯ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದು ಮಂಡ್ಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮೃತಿ ಇರಾನಿಗೆ ಮತ್ತೊಂದು ಸಂಕಷ್ಟ: ಸಂಸದೀಯ ಸಮಿತಿಯಿಂದಲೂ ಔಟ್